ಮೈಸೂರು: ನಟ ದರ್ಶನ್ ಕುರಿತ ವಿವಾದಾತ್ಮಕ ವಿಚಾರವಾಗಿ ಸಂಜೆಯಷ್ಟೇ ಚಿತ್ರ ನಿರ್ದೇಶಕ ಇಂದ್ರಜಿತ್ ಸುದ್ದಿಗೋಷ್ಠಿ ಕರೆದು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಉಂಟಾಗಿದೆ. ಮಾತ್ರವಲ್ಲ, ಈ ವಿಚಾರವಾಗಿ ಇದುವರೆಗೆ ಬಹುತೇಕ ಸುಮ್ಮನಿದ್ದ ಉದ್ಯಮಿಯೊಬ್ಬರು ಈಗ ಮಾತನಾಡಿದ್ದಲ್ಲದೆ, ಇಂದ್ರಜಿತ್ ಆರೋಪಗಳೆಲ್ಲವನ್ನೂ ಅಲ್ಲಗಳೆದಿದ್ದಾರೆ.
ಮೈಸೂರಿನ ತಮ್ಮ ಹೋಟೆಲ್ ಮುಂದೆ ಜಮಾಯಿಸಿದ್ದ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಉದ್ಯಮಿ ‘ಸಂದೇಶ್’ ನಾಗರಾಜ್, ತಮ್ಮ ಪುತ್ರ ಸಂದೇಶ್ ಈ ವಿಚಾರವಾಗಿ ಇಂದ್ರಜಿತ್ ಜೊತೆ ಮಾತನಾಡಿಲ್ಲ. ಇಂದ್ರಜಿತ್ ಬಿಟ್ಟಿರುವ ಆಡಿಯೋದಲ್ಲಿ ಇರುವುದು ನನ್ನ ಮಗನ ಧ್ವನಿಯಲ್ಲ. ಇಂದ್ರಜಿತ್ ಹೇಳಿರುವುದೆಲ್ಲವೂ ಸುಳ್ಳು. ಅವುಗಳಿಂದಾಗಿ ಉಂಟಾಗಿರುವ ಗೊಂದಲದಿಂದಾಗಿ ಈಗ ನನ್ನ ಮಗನನ್ನು ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಕಳುಹಿಸುತ್ತಿದ್ದೇನೆ ಎಂದು ಹೇಳಿದರು.
ಈ ವಿಷಯವಾಗಿ ತಮ್ಮ ಹೋಟೆಲ್ ಸುದ್ದಿಯ ಕೇಂದ್ರವಾಗಿ ಪರಿಣಮಿಸಿರುವ ಕುರಿತು ಮಾತನಾಡಿರುವ ಅವರು, ಇದು ಹೋಟೆಲೇ ಅಥವಾ ಪೊಲೀಸ್ ಸ್ಟೇಷನ್ನೇ? ಇದನ್ನೆಲ್ಲ ನೋಡಿ ಈಗಾಗಲೇ ಇಬ್ಬರು ಗ್ರಾಹಕರು ಹೋಟೆಲ್ನಿಂದ ತೆರಳಿದ್ದಾರೆ. ನಮ್ಮದು ಹೊಟ್ಟೆಪಾಡು, ದಯವಿಟ್ಟು ಸಹಕರಿಸಿ, ಇದನ್ನು ಇಲ್ಲಿಗೇ ಬಿಟ್ಟು ಬಿಡಿ, ನಮ್ಮ ಹೋಟೆಲನ್ನು ಚಿತ್ರೀಕರಿಸಬೇಡಿ ಎಂದು ಮಾಧ್ಯಮದವರನ್ನು ಕೋರಿಕೊಂಡರು.
ದೆಹಲಿಯಲ್ಲಿ ಮೋದಿ-ಬಿಎಸ್ವೈ ಮಹತ್ವದ ಮಾತುಕತೆ: ಚರ್ಚಿಸಿದ್ದೇನು ಎಂಬುದಕ್ಕೆ ಯಡಿಯೂರಪ್ಪ ಹೇಳಿದ್ದಿಷ್ಟು..
ಇನ್ನು ಸ್ಮಾರ್ಟ್ಫೋನ್ ಇಲ್ಲದೆ ವಾಟ್ಸ್ಆ್ಯಪ್ ಬಳಸಬಹುದು; ಬೀಟಾ ಯೂಸರ್ಸ್ಗೆ ಹೊಸ ಆಪ್ಷನ್!