ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ಬಸ್ ಹತ್ತುವ ವೇಳೆ ಮಹಿಳೆಯ ಐದು ತೊಲ ಬಂಗಾರದ ಸರ ಭಾನುವಾರ ಕಳ್ಳತನವಾಗಿದೆ.
ಇದನ್ನೂ ಓದಿ: ರೈಲಿನಲ್ಲಿ ಆಭರಣವಿದ್ದ ಬ್ಯಾಗ್ ಕಳ್ಳತನ
ಪಟ್ಟಣದ ನಿವಾಸಿ ಲಕ್ಷ್ಮೀ ಶಿವರಾಜ ಅವರು ಬಳ್ಳಾರಿಯಿಂದ ತಿಂಥಣಿ ಬ್ರಿಡ್ಜ್ ಮೂಲಕ ದೇವದುರ್ಗಕ್ಕೆ ಹೋಗುತ್ತಿದ್ದರು. ಆಗ ಬ್ಯಾಗ್ನಲ್ಲಿರುವ ಚಿನ್ನದ ಸರ ಕಳ್ಳತನವಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಮಹಿಳೆ ಚಾಲಕ-ನಿರ್ವಾಹಕರಿಗೆ ತಿಳಿಸಿದ್ದಾರೆ.
ನಂತರ ಜಾಲಹಳ್ಳಿ ಠಾಣೆಗೆ ಬಸ್ ಕರೆತಂದು ಪ್ರಯಾಣಿಕರ ಬ್ಯಾಗ್ಗಳನ್ನು ಪರಿಶೀಲನೆ ಮಾಡಲಾಯಿತು. ಅದರೆ ಚಿನ್ನ ಸಿಗಲಿಲ್ಲ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.