ಬೆಂಗಳೂರು: ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿದ್ದ ಲಾಕ್ಡೌನ್ನಿಂದ ಕಳೆದ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿದ್ದ ಬಸ್ ಸಂಚಾರ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಹಲವು ಗೊಂದಲಗಳ ನಡುವೆಯೂ ಬಸ್ ಓಡಾಡಲು ಶುರು ಮಾಡಿವೆ.
ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ಬಸ್ ಸಂಚಾರಕ್ಕೆ ಅನುವು ಮಾಡಿಕೊಡುತ್ತಲೇ ಬೀದರ್ ಸೇರಿದಂತೆ ಚಾಮರಾಜನಗರದ ಗಡಿ ಭಾಗದವರೆಗೂ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ದೌಡಾಯಿಸುತ್ತಿದ್ದಾರೆ. ಬಸ್ ಹತ್ತುವ ಮುನ್ನ ಪ್ರತಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಸೇರಿದಂತೆ ಸ್ಯಾನಿಟೈಸರ್ ನೀಡಿ ಮುಂಜಾಗ್ರತೆ ಕಾಪಾಡಿಕೊಳ್ಳುವ ಕೆಲಸಕ್ಕೆ ಸರ್ಕಾರದ ಆದೇಶದಂತೆ ಬಸ್ ನಿರ್ವಾಹಕರು ಮುಂದಾಗಿದ್ದಾರೆ.
ಪ್ರತಿ ಬಸ್ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಕೆಲವೆಡೆ ತಡವಾಗಿ ಬಸ್ ಸಂಚಾರ ಆರಂಭವಾಗಿದ್ದರೆ, ಇನ್ನು ಕೆಲವೆಡೆ ಬೆಳಗ್ಗೆ ಏಳರಿಂದಲೇ ಬಸ್ಗಳು ರಸ್ತೆ ಇಳಿದಿವೆ.
ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್ ಟ್ರಂಪ್…!
ಹತ್ತು ವರ್ಷ ಕೆಳಗಿನ ಮಗು ಮತ್ತು ವೃದ್ಧರಿಗೆ ಪ್ರಯಾಣಿಸಲು ಅನುಮತಿ ನೀಡಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ಕೆಲವೆಡೆ ಕುಟುಂಬ ಸಮೇತ ಬಂದವರಲ್ಲಿ ಮಗು ಮತ್ತು ವೃದ್ಧರಿದ್ದ ಕಾರಣಕ್ಕೆ ವಾಪಸ್ ಕಳುಹಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಉರುಳಿಬಿದ್ದ ಟ್ರಕ್: ಮೂವರು ಮಹಿಳಾ ಕಾರ್ಮಿಕರ ಸಾವು, 12 ಮಂದಿಯ ಸ್ಥಿತಿ ಗಂಭೀರ