More

    ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ … ಅಂತಿಮ ದರ್ಶನಕ್ಕೆ ಬ್ರೇಕ್ ಹಾಕಿದ ಲಾಕ್‌ಡೌನ್

    ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಹೆಬ್ಬಾಳದ ಚಿತಾಗರದಲ್ಲಿ ನಡೆಯಿತು. ಕೆಲವೇ ಮಂದಿಯ ಸಮ್ಮುಖದಲ್ಲಿ ಪ್ರಕಾಶ್ ಅವರ ಅಂತ್ಯಕ್ರಿಯೆ ಮಾಡಲಾಯಿತು.

    ಸಾಮಾನ್ಯವಾಗಿ ಜನಪ್ರಿಯ ಕಲಾವಿದರು ನಿಧನರಾದ ಸಂದರ್ಭದಲ್ಲಿ, ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಜನ ಜಮಾಯಿಸುವುದಿದೆ. ಅದರಲ್ಲೂ ಪ್ರಕಾಶ್ ಅವರ ಸ್ನೇಹಿತರ ವಲಯ ಬಹಳ ದೊಡ್ಡದು. ಆದರೆ, ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಬಂದಿದ್ದ ಜನ ಬಹಳ ಕಡಿಮೆ. ಅದಕ್ಕೆ ಕಾರಣ ಲಾಕ್‌ಡೌನ್. ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆಯಬೇಕೆಂದು ಹಲವರಿಗೆ ಇತ್ತಾದರೂ, ಲಾಕ್‌ಡೌನ್ ಕಾರಣದಿಂದ ಅಂತಿಮ ದರ್ಶನ ಪಡೆಯಲಾಗಲಿಲ್ಲ.

    ಇದರ ನಡುವೆಯೂ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆದವರೆಂದರೆ, ಅದು ನಟ ‘ದುನಿಯಾ’ ವಿಜಯ್. ಮಿಕ್ಕಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ಮಾಪಕರಾದ ಎಂ.ಜಿ. ರಾಮಮೂರ್ತಿ, ಉಮೇಶ್ ಬಣಕಾರ್ ಮುಂತಾದವರು, ಅಂತ್ಯಸಂಸ್ಕಾರದ ವೇಳೆ ಹಾಜರಿದ್ದು, ಬುಲೆಟ್ ಪ್ರಕಾಶ್ ಅವರ ಕುಟುಂಬದವರಿಗೆ ನೆರವಾದರು.

    ಒಂದು ಫೋನ್​ ಕಾಲ್‌ನಲ್ಲಿ ಜವಾಬ್ದಾರಿ ತೆಗೆದುಕೊಂಡರು ದರ್ಶನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts