ಗದಗ: ಬಿ.ಆರ್.ಅಂಬೇಡ್ಕರ್ ಅವರ 67ನೇಯ ಮಹಾ ಪರಿ ನಿರ್ವಾಣ ದಿನ ಅಂಗವಾಗಿ ಶಿವಪ್ಪ ಮುಳಗುಂದ ಅವರು ನಗರಸಭೆಯ ಆವರಣದಲ್ಲಿರುವ ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗದಗ ಬಡಟಗೇರಿ ಮೋಚಿಗಾರ ಸಮಾಜದ ಬಾಂಧವರಾದ ಬೂದಪ್ಪ ಹುಣಶೀಮರದ ,ಲಕ್ಷ$್ಮಣ ಮುಳಗುಂದ, ಲಕ್ಷ$್ಮಣ ದೊಡ್ಡಮನಿ, ಚಿದಾನಂದ ಹೊಸಮನಿ, ಬಸವರಾಜ ಗಾರವಾಡ, ಅಣ್ಣಪ್ಪ ಗಾರವಾಡ, ಶಂಕರ ಮುಳಗುಂದ ಸೇರಿದಂತೆ ಹಲವರಿದ್ದರು.
—————————-
ಗದಗ-ಬೆಟಗೇರಿ ನಗರಸಭೆ ನೌಕರರ ಸಹಕಾರಿ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರವರ ಮಹಾಪರಿನಿರ್ವಾಣದ ನಿಮಿತ್ಯ ನಗರಸಭೆ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಅರ್ಪಣೆ ಮಾಡಲಾಯಿತು. ಕೃಷ್ಣೇಗೌಡ ಪಾಟೀಲ, ಲಕ್ಷ$್ಮಣ ಛಲವಾದಿ, ಶೇಕಪ್ಪ ತಮ್ಮಣ್ಣವರ, ಎಂ. ಎಂ. ಮಕಾನದಾರ, ಹೆಮೇಶ ಯಟ್ಟಿ, ಚಂದ್ರಶೇಖರ ಹಾದಿಮನಿ, ಅರವಿಂದ ಕುರ್ತಕೋಟಿ, ದ್ಯಾಮಣ್ಣ ರಾಮಗಿರಿ, ಹನಮಂತಪ್ಪ ದೊಡ್ಡಮನಿ, ನಾಗರಾಜ ಬಳ್ಳಾರಿ ಹಲವರು ಇದ್ದರು.
—————————-
ಗದಗ: ಡಾ. ಬಿ. ಆರ್. ಅಂಬೇಡ್ಕರವರ ಮಹಾಪರಿನಿರ್ವಾಣ ನಿಮಿತ್ಯ ನಗರಸಭೆಯ ಆವರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರವರ ಪುತ್ಥಳಿಗೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಹಳೇ ಬಸ್ ನಿಲ್ದಾಣದ ಅಟೋ ಚಾಲಕರ, ಮಾಲಕರ ಸಂಘದ ಸದಸ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹೇಮಂತ ಕಾಳೆ, ಪ್ರಶಾಂತ ದೊಡ್ಡಮನಿ, ಚಂದ್ರಶೇಖರ ಸಾಲಮನಿ, ಲಿಂಗರಾಜ ಹೊಸಮನಿ, ರವಿ ತಮ್ಮಣ್ಣನವರ, ಅಶೋಕ ಕುಂದಗೋಳ, ವಿರೇಶ ಕಡಿವಾಳ, ಸಿಕಂದರ ಕೊಟ್ಟೂರು ಹಲವರು ಇದ್ದರು.
—————————-
ಗದಗ: ಡಾ. ಬಿ. ಆರ್. ಅಂಬೇಡ್ಕರವರ ಮಹಾಪರಿನಿರ್ವಾಣ ನಿಮಿತ್ಯ ಗದಗ ಬೆಟಗೇರಿ ನಗರಸಭೆಯ ವತಿಯಿಂದ ಉಷಾ ದಾಸರ, ಸುನಂದಾ ಬಾಕಳೆ ಸೇರಿದಂತೆ ನಗರಸಭೆ ಸಿಬ್ಬಂದಿಗಳು ನಗರಸಭೆಯ ಆವರಣದಲ್ಲಿ ಇರುವ ಡಾ. ಬಿ. ಆರ್. ಅಂಬೇಡ್ಕರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಗಂಗಪ್ಪ ಎಂ, ಪಿ. ಎ್. ಶೇರಖಾನೆ, ಎಚ್. ಎ. ಬಂಡಿವಡ್ಡರ, ಟಿ. ಎಚ್. ದ್ಯಾವನೂರ, ಶೋಭಾ ಬೆಳ್ಳಿಕೊಪ್ಪ, ಆನಂದ ಬದಿ, ಎ. ಎನ್. ಪುಣೇಕರ, ಕೆ. ಓ. ಯಾದವಾಡ, ಎಸ್. ವೈ. ಸಂಕನಗೌಡ್ರ, ಸಿಂಧು ಗಾಳಿ, ವೆಂಕಟೇಶ ರಾಮಗಿರಿ, ಎಂ. ಎಂ. ಮಕಾನದಾರ, ನಾಗೇಶ ಗೊರಣ್ಣವರ, ಸುಷ್ಮಾ ಗುಡಿ, ಎಂ ಎಂ ಮುಜಾವರ ಹಲವರು ಇದ್ದರು.