More

    ಬೂತ್ ಅಧ್ಯಕ್ಷರು ಆಯಾ ಬೂತ್‌ಗಳ ನಾಯಕರು

    ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ 135 ಸೀಟು ಗೆಲ್ಲುವುದಕ್ಕೆ ಬೂತ್ ಅಧ್ಯಕ್ಷರೇ ಕಾರಣ. ಬೂತ್ ಅಧ್ಯಕ್ಷರು ಆಯಾ ಬೂತ್‌ಗಳ ನಾಯಕರು ಎಂದು ಶಿವಮೊಗ್ಗ ವಿಧಾನಸಭೆ ಪರಾಜಿತ ಅಭ್ಯರ್ಥಿ ಎಚ್.ಸಿ.ಯೋಗೇಶ್ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ವಾರ್ಡ್ ಮತ್ತು ಬೂತ್‌ಮಟ್ಟದ ಅಧ್ಯಕ್ಷರ ಕಾರ್ಯಾಗಾರದಲ್ಲಿ ಮಾತನಾಡಿ, ಬೂತ್ ಮತ್ತು ವಾರ್ಡ್ ಅಧ್ಯಕ್ಷರು ಸಶಕ್ತವಾಗಿ ಇದ್ದ ಕಡೆ ಕೆಲಸಗಳು ಆಗುತ್ತವೆ. ಅಶಕ್ತವಾದರೆ ಕೆಲಸಗಳು ಕುಂಠಿತಗೊಳ್ಳಲಿವೆ ಎಂದರು.
    ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಕೊಟ್ಟಿದ್ದು, ಅದರ ಪ್ರಚಾರ ಲೋಕಸಭೆ ಚುನಾವಣೆಯಲ್ಲಿ ಮಾಡಬೇಕಿದೆ. ಗ್ಯಾರಂಟಿಗಳ ಹೆಜ್ಜೆ ಗುರುತು ಮೂಡಿಸಿರುವುದನ್ನು ಅಚ್ಚಳಿಯದೇ ಇರುವಂತೆ ಮಾಡಬೇಕು. ಒಂದು ನಿಮಿಷ ಒಂದು ಮನೆ ಘೋಷವಾಕ್ಯದಡಿ ಪ್ರಚಾರ ಮಾಡಬೇಕಿದೆ. ಮನೆ ಮನೆಗೆ ಹೋಗಿ ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಮಾಡಬೇಕಿದೆ. ಶಿವಮೊಗ್ಗದಲ್ಲಿ 20 ವರ್ಷಗಳ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಗೆಲ್ಲುವುದಕ್ಕೆ ಅವಕಾಶವಿದ್ದು, ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕಿದೆ ಎಂದರು.
    ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಜಿಪಂ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಬಲ್ಕಿಷ್ ಬಾನು, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ವಿಶ್ವನಾಥ ಕಾಶಿ, ನಾಗರಾಜ್ ಕಂಕಾರಿ, ವಿಜಯಕುಮಾರ್, ಬಿ.ಎ.ರಮೇಶ್ ಹೆಗಡೆ, ಯಮುನಾ ರಂಗೇಗೌಡ, ಚೇತನ್, ಮಧುಸೂದನ್, ಅಲ್ತಾಬ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts