ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ಅಜಿತ್ ಸೇರಿದಂತೆ ಅವರ ಕುಟುಂಬಕ್ಕೆ ಅನಾಮಿಕ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಒಡ್ಡಿರುವುದಾಗಿ ಶನಿವಾರ ಸಂಜೆ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಜುಲೈ 18ರಂದು ಚೆನ್ನೈ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ಅನಾಮಿಕ, ಇಂಜಂಬಕ್ಕಮ್ನಲ್ಲಿರುವ ಅಜಿತ್ ಮನೆಯಲ್ಲಿ ಬಾಂಬ್ ಇರುವುದಾಗಿ ಹೇಳಿ ತಕ್ಷಣ ಫೋನ್ ಸಂಪರ್ಕ ಕಡಿತಗೊಳಿಸಿದ್ದಾನೆ.
ಬೆದರಿಕೆ ಕರೆ ಪ್ರಕಾರ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಅಜಿತ್ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆದಿದ್ದು, ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ ಅನಾಮಿಕ ಕರೆಯು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಿಂದ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಯಾರೆಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ. ಒಂದೇ ತಿಂಗಳಲ್ಲಿ ಅಜಿತ್ ಸೇರಿದಂತೆ ವಿಜಯ್ ಮತ್ತು ರಜಿನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಎಲ್ಲವೂ ಸಹ ಹುಸಿ ಬಾಂಬ್ ಬೆದರಿಕೆಯಾಗಿದೆ.
ಇದನ್ನೂ ಓದಿ: ನಿಂತ್ಕೊಳ್ಳಿ ನಿಮ್ಗೆ ಕರೊನಾ ಇದೆ ಅಂದ್ರೂ ಬೈಕ್ ಏರಿ ಪರಾರಿಯಾದ ಯುವತಿ!
ಈ ಹಿಂದೆ ವಿಜಯ್ ಮನೆಗೂ ವಿಲ್ಲುಪುರಂ ಜಿಲ್ಲೆಯಿಂದ ಬೆದರಿಕೆ ಕರೆ ಬಂದಿತ್ತು. ಭುವನೇಶ್ ಎಂಬ ಹೆಸರಿನಲ್ಲಿ ಕರೆ ಬಂದಿತ್ತು. ಇದರ ಬೆನಲ್ಲೇ ಆತನ ಮನೆಗೆ ಪೊಲೀಸರು ಭೇಟಿ ನೀಡಿದಾಗ ಆತನೊಬ್ಬ ಮಾನಸಿಕ ಅಸ್ವಸ್ಥ ಎಂದು ಕುಟುಂಬ ಕ್ಷಮೆಯಾಚಿಸಿತ್ತು. (ಏಜೆನ್ಸೀಸ್)
ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಿ ಎಂದ ನಿರ್ಭಯಾ ರೇಪ್ ಕೇಸ್ನ ವಕೀಲೆ!