More

    ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

    ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಕೋಡಿ ಎಂಬಲ್ಲಿ ಮೀನುಗಾರರ ದೋಣಿಯೊಂದು ನಡುರಾತ್ರಿ ದಡಕ್ಕೆ ಅಪ್ಪಳಿಸಿರುವ ಘಟನೆ ನಡೆದಿದೆ. ಬೋಟ್​ನಲ್ಲಿದ್ದ 10 ಮಂದಿಯಲ್ಲಿ ಐವರು ಮೀನುಗಾರರು ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ.

    ಉಳ್ಳಾಲದ ಅಶ್ರಫ್ ಎಂಬುವರಿಗೆ ಸೇರಿದ ಮೀನುಗಾರಿಕಾ ಬೋಟ್ ರಾತ್ರಿ 1.30ಕ್ಕೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ವಾಪಸ್​ ಬರುವಾಗ ಅಝಾನ್ ಎಂಬ ಹೆಸರಿನ ಈ ಬೋಟ್ ದಡಕ್ಕೆ ಬಂದು ಜೋರಾಗಿ ಅಪ್ಪಳಿಸಿತು. ಚಾಲಕ ಇನ್ನೋರ್ವನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ಈ ಅವಘಡ ಸಂಭವಿಸಿತು ಎನ್ನಲಾಗಿದೆ.

    ಕುಡಿದ ಮತ್ತಿನಲ್ಲಿ ಮೀನುಗಾರರು ; ನಡುರಾತ್ರಿ ದಡಕ್ಕೆ ಅಪ್ಪಳಿಸಿದ ದೋಣಿ

    ಈ ಬೋಟ್​ನಲ್ಲಿದ್ದ ಕನ್ಯಾಕುಮಾರಿ ಮೂಲದ ಐವರು ಮೀನುಗಾರರು ಕುಡಿತದ ಮತ್ತಿನಲ್ಲಿದ್ದರು. ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು ಎಂದು ಬೋಟ್​ನಲ್ಲಿದ್ದ 10 ಮಂದಿಯನ್ನೂ ರಕ್ಷಿಸಿರುವ ಸ್ಥಳೀಯರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ದೀದಿ, ನೀವಿಲ್ಲದೆ ಬದುಕಲಾರೆ : ಮಾಜಿ ಟಿಎಂಸಿ ನಾಯಕಿ

    ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts