ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಕೋಡಿ ಎಂಬಲ್ಲಿ ಮೀನುಗಾರರ ದೋಣಿಯೊಂದು ನಡುರಾತ್ರಿ ದಡಕ್ಕೆ ಅಪ್ಪಳಿಸಿರುವ ಘಟನೆ ನಡೆದಿದೆ. ಬೋಟ್ನಲ್ಲಿದ್ದ 10 ಮಂದಿಯಲ್ಲಿ ಐವರು ಮೀನುಗಾರರು ಕುಡಿದ ಮತ್ತಿನಲ್ಲಿದ್ದರು ಎನ್ನಲಾಗಿದೆ.
ಉಳ್ಳಾಲದ ಅಶ್ರಫ್ ಎಂಬುವರಿಗೆ ಸೇರಿದ ಮೀನುಗಾರಿಕಾ ಬೋಟ್ ರಾತ್ರಿ 1.30ಕ್ಕೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ವಾಪಸ್ ಬರುವಾಗ ಅಝಾನ್ ಎಂಬ ಹೆಸರಿನ ಈ ಬೋಟ್ ದಡಕ್ಕೆ ಬಂದು ಜೋರಾಗಿ ಅಪ್ಪಳಿಸಿತು. ಚಾಲಕ ಇನ್ನೋರ್ವನ ಕೈಯಲ್ಲಿ ಬೋಟ್ ನೀಡಿದ ಪರಿಣಾಮ ಈ ಅವಘಡ ಸಂಭವಿಸಿತು ಎನ್ನಲಾಗಿದೆ.
ಈ ಬೋಟ್ನಲ್ಲಿದ್ದ ಕನ್ಯಾಕುಮಾರಿ ಮೂಲದ ಐವರು ಮೀನುಗಾರರು ಕುಡಿತದ ಮತ್ತಿನಲ್ಲಿದ್ದರು. ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡುತ್ತಿದ್ದರು ಎಂದು ಬೋಟ್ನಲ್ಲಿದ್ದ 10 ಮಂದಿಯನ್ನೂ ರಕ್ಷಿಸಿರುವ ಸ್ಥಳೀಯರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಆರ್ನಾಟ್ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ