ಬೆಂಗಳೂರು: ಇನ್ನುಂದೆ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಒಂದು ವೇಳೆ ಟಿಕೆಟ್ ತೆಗೆದುಕೊಳ್ಳದೇ, ‘ನಿರ್ವಾಹಕ ನನ್ನನ್ನು ಟಿಕೆಟ್ ಕೇಳಿಲ್ಲ’ ಎನ್ನುವ ಹಾಗೇ ಇಲ್ಲ.
ಹೌದು ಈ ಬಗ್ಗೆ ಬಿಎಂಟಿಸಿ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ಪ್ರಯಾಣಿಕರ ತಪ್ಪಿಗೆ ಕಂಡಕ್ಟರ್ಸ್ ಹೊಣೆಯಲ್ಲ. ಪ್ರಯಾಣಿಕರೇ ಕಂಡಕ್ಟರ್ಸ್ ಗಳನ್ನು ಹುಡುಕಿ ಟಿಕೆಟ್ ಪಡೆಯಬೇಕು. ಈ ಹಿನ್ನೆಲೆಯಲ್ಲಿ ದಂಡ, ಶಿಕ್ಷೆಯಿಂದ ಕಂಡಕ್ಟರ್ ಗಳಿಗೆ ವಿನಾಯಿತಿ ನೀಡಲಾಗಿದೆ.
ಸೀಟುಗಳ ಲಭ್ಯತೆ ಮೀರಿ ಜನ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದರೇ ಮಾತ್ರ ಈ ನಿಯಮ ಅನ್ವಯವಾಗಲಿದೆ. ಮೂರು ಬಾರಿ ಮಾತ್ರ ಕಂಡಕ್ಟರ್ಗೆ ವಿನಾಯಿತಿ ಇರಲಿದೆ. ಇದು ಹವಾನಿಯಂತ್ರಿತ ಬಸ್ಗಳಿಗೆ ಅನ್ವಯವಾಗುವುದಿಲ್ಲ. ಇದೇ ಮಾರ್ಚ್ 15 ರಿಂದ ಈ ಆದೇಶ ಜಾರಿಗೆ ಬರಲಿದೆ.
ಜನಸಂದಣಿಯ ಬಸ್ಗಳಲ್ಲಿ ಕೆಲವೊಬ್ಬರು ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ಗೆ ವಂಚಿಸುತ್ತಿದ್ದರು. ಹೀಗಾಗಿ ಬಿಎಂಟಿಸಿ ಅಧಿಕಾರಿಗಳು ಕಂಡಕ್ಟರ್ನ್ನೂ ಹೊಣೆಗಾರರನ್ನಾಗಿ ಮಾಡಿ ಅವರಿಗೆ ಶಿಕ್ಷೆ ನೀಡುತ್ತಿದ್ದರು. ಈ ನಿಯಮ ಸರಿ ಇಲ್ಲ ಬದಲಾಯಿಸಿ ಎಂದು ಬಿಎಂಟಿಸಿ ಕಾರ್ಮಿಕ ಯೂನಿಯನ್ಗಳು ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಎಂಡಿ ಸಿ ಶಿಕಾ ಈ ಆದೇಶ ಮಾಡಿದ್ದಾರೆ.
ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ ಸರ್ಕಾರಿ ಉದ್ಯೋಗಿ: ಇಂಧನ ದರ ಏರಿಕೆ ಕಾರಣವಲ್ಲ!