ಬೆಂಗಳೂರು: ಬಸ್ ಪ್ರಯಾಣದರದಲ್ಲಿ ಬದಲಾವಣೆ ಮಾಡಿರುವ ಬಿಎಂಟಿಸಿ ಈಗ ಬಸ್ಗಳ ಸಂಚಾರದ ಅವಧಿ ಹೆಚ್ಚಿಸಲು ಪೊಲೀಸ್ ಇಲಾಖೆ ಅನುಮತಿ ಕೋರಿದೆ. ಕರೊನಾ ಸೋಂಕಿನ ಭಯದಿಂದ ಟಿಕೆಟ್ ನೀಡಿಕೆ ರದ್ದು ಮಾಡಿದ್ದ ಬಿಎಂಟಿಸಿ, ದಿನದ, ವಾರದ ಅಥವಾ ಮಾಸಿಕ ಪಾಸ್ ಖರೀದಿಸಿ ಬಸ್ಗಳಲ್ಲಿ ಸಂಚರಿಸುವುದನ್ನು ಕಡ್ಡಾಯವಾಗಿಸಿತ್ತು. ಇದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಈ ಮೊದಲಿನಂತೆ ಬಸ್ಗಳಲ್ಲಿಯೇ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ
ಸಮಯದ ಅಭಾವ: ಸರ್ಕಾರದ ಆದೇಶದಂತೆ ಬಿಎಂಟಿಸಿ ಬಸ್ಗಳು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಸಂಚರಿಸಬೇಕು. ಆದರೆ, ಬಸ್ಗಳು ಬೆಳಗ್ಗೆ ಡಿಪೋದಿಂದ ನಿಲ್ದಾಣಗಳಿಗೆ ಬರುವಾಗ 30 ನಿಮಿಷ ತಡವಾಗುತ್ತಿದೆ. ಅದೇ ರೀತಿ ರಾತ್ರಿ 7 ಗಂಟೆಯೊಳಗೆ ಚಾಲಕರು, ನಿರ್ವಾಹಕರು ಮನೆಗೆ ಸೇರಬೇಕಿರುವ ಕಾರಣ ಸಂಜೆ 6 ಗಂಟೆಗೆ ಬಸ್ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಬೆಳಗ್ಗೆ 6ಕ್ಕೆ ಸೇವೆ ಆರಂಭಿಸಿ ರಾತ್ರಿ 8 ಗಂಟೆಗೆ ಮುಕ್ತಾಯಗೊಳಿಸಲು ಅನುಮತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಇದನ್ನೂ ಓದಿ: ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ
ಅನುಮತಿ ನಂತರ ಕ್ರಮ: 20ರಂದೇ ಸಲ್ಲಿಕೆಯಾಗಿರುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದ್ದು, ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಆಯುಕ್ತರು ರ್ಚಚಿಸಬೇಕಿದೆ. ಅಲ್ಲದೆ, ಸದ್ಯ ಹೇರಲಾಗಿರುವ ನಿಷೇಧಾಜ್ಞೆಯಲ್ಲಿ ಬಿಎಂಟಿಸಿ ಬಸ್ಗಳ ಸಂಚಾರದ ಅವಧಿ ಬದಲಿಸಬೇಕಿದೆ. ಈ ಎಲ್ಲ ಕ್ರಮಗಳ ನಂತರ ನಗರ ಪೊಲೀಸ್ ಆಯುಕ್ತರಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ.
ಇದನ್ನೂ ಓದಿ: ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ
ಪ್ರಯಾಣಿಕರು ಹೆಚ್ಚಳ
ಈವರೆಗೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಮಂಗಳವಾರ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಮಧ್ಯಾಹ್ನದ ವೇಳೆಯೂ ಬಸ್ಗಳು ಪ್ರಯಾಣಿಕರಿಂದ ತುಂಬಿದ್ದವು.
ಬಸ್ಗಳ ಕೊರತೆ: ಮಂಗಳವಾರ 3,500 ಬಸ್ಗಳ ಸಂಚಾರಕ್ಕೆ ಬಿಎಂಟಿಸಿ ನಿರ್ಧರಿಸಿತ್ತು. ಆದರೆ, ಬೆಳಗ್ಗೆ 10 ಗಂಟೆವರೆಗೆ ನಿಗದಿಯಷ್ಟು ಬಸ್ಗಳು ಸಂಚರಿಸದೆ ಪ್ರಯಾಣಿಕರು ಪರದಾಡಿದರು. ಕೇಂದ್ರನಿಲ್ದಾಣದಲ್ಲಿ ಬೆಳಗ್ಗೆ ಬಸ್ಗಳಿಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ನಿಲ್ದಾಣಕ್ಕೆ ಧಾವಿಸಿ ಹೆಚ್ಚಿನ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ: ರಾಜ್ಯ ಪೊಲೀಸ್ ಶ್ವಾನ ದಳ ಬಲವರ್ಧನೆ
93 ಸಾವಿರ ಜನರ ಸಂಚಾರ: ಕೆಎಸ್ಸಾರ್ಟಿಸಿ ಸೇವೆ ಪುನರಾರಂಭವಾದ ನಂತರದಿಂದ ಈವರೆಗಿನ ಅಂಕಿ-ಅಂಶದಂತೆ ಮಂಗಳವಾರ ಅತಿಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. 3,171 ಬಸ್ಗಳ ಮೂಲಕ 93,700 ಜನರು ವಿವಿಧ ನಗರಗಳಿಗೆ ಬಸ್ಗಳ ಮೂಲಕ ತೆರಳಿದ್ದಾರೆ. ಮೇ 19ರಿಂದ ಈವರೆಗೆ 18,409 ಬಸ್ಗಳು ಕಾರ್ಯಾಚರಣೆಗೊಂಡಿದ್ದು ಒಟ್ಟು 5.55 ಲಕ್ಷ ಜನರು ಬಸ್ ಸೇವೆ ಪಡೆದಿದ್ದಾರೆ. ಅದರಲ್ಲಿ ಬೆಂಗಳೂರಿನಿಂದಲೇ 5,032 ಬಸ್ಗಳ ಮೂಲಕ 82 ಸಾವಿರ ಜನ ವಿವಿಧ ಕಡೆಗೆ ಪ್ರಯಾಣಿಸಿದ್ದಾರೆ.