ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಘೋಷಿಸಿದ ಗ್ಯಾರಂಟಿಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವ ರಾಜ್ಯ ಬಿಜೆಪಿ(BJP), ಸುರ್ಜೆವಾಲ ಅವರನ್ನು ‘ಕಲೆಕ್ಷನ್ ಏಜೆಂಟ್’ ಎಂದು ಟ್ವೀಟ್ ಮೂಲಕ ಕರೆದಿದೆ.
ಇದನ್ನೂ ಓದಿ: ನಾನೇ ದೇವರು ನೀನೇಕೆ ಚರ್ಚಿಗೆ ಹೋಗ್ತೀಯಾ ಎಂದು ಮಗನಿಂದ ತಾಯಿಗೆ ಅವಾಜ್! ಚರ್ಚಿನ ವಸ್ತುಗಳು ಧ್ವಂಸ
ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ, “ಕಲೆಕ್ಷನ್ ಏಜೆಂಟ್ ಸುರ್ಜೆವಾಲ ಅವರ ಎಟಿಎಂ ಸರ್ಕಾರದ ಸುಳ್ಳು ಗ್ಯಾರಂಟಿಗಳು ಹೀಗಿವೆ.
- ಕಿವಿ ಮೇಲೆ ಹೂವು, ಗೃಹ ಜ್ಯೋತಿ – ವಿದ್ಯುತ್ ದರ ಏರಿಕೆ, ಸರ್ವರ್ ಕ್ರ್ಯಾಶ್!
- ಕಿವಿ ಮೇಲೆ ಹೂವು, ಶಕ್ತಿ – ಬಸ್ನಲ್ಲಿ ಹೋರಾಡಿ ನಿಶಕ್ತಳಾದ ಸ್ವಾಭಿಮಾನಿ ಹೆಣ್ಣು, ಬಸ್ಸೂ ಇಲ್ಲಾ, ಸೀಟೂ ಇಲ್ಲ!
- ಕಿವಿ ಮೇಲೆ ಹೂವು, ಅನ್ನ ಭಾಗ್ಯ-ಮೋದಿ ಸರ್ಕಾರದ 5 ಕೆಜಿ ಅಕ್ಕಿ ಫಿಕ್ಸ್, ಸಿದ್ದರಾಮಯ್ಯ ಅಕ್ಕಿ ಠುಸ್!
- ಕಿವಿ ಮೇಲೆ ಹೂವು, ಗೃಹಲಕ್ಷ್ಮೀ-ಸ್ತ್ರೀಯರಿಗೆ 2,000ದ ಆಮಿಷ, ಸಿಕ್ಕಿದ್ದು ಖಾಲಿ ಸೀಸ!
- ಕಿವಿ ಮೇಲೆ ಹೂವು, ಯುವ ನಿಧಿ-ಕಳೆದ ವರ್ಷ ಪಾಸಾದವರಿಗೆ ಯಾಕ್ ಬೇಕು ದುಡ್ಡು!
ರಾಜ್ಯದ ಜನರ ಕಿವಿ ಮೇಲೆ ಹೂವು ಇಡ್ತೀವಿ ಅಂತ ಅಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಚುನಾವಣೆಯ ಮೊದಲೇ ಅಣಕಿಸಿದ್ದರು! ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ? ದೊಡ್ಮನೆ ಸೊಸೆ ನೀಡಿದ ಸ್ಪಷ್ಟನೆ ಹೀಗಿದೆ…