ಬೆಂಗಳೂರು: ನಾನೇ ದೇವರು, ನೀನೇಕೆ ಚರ್ಚಿಗೆ ಹೋಗುತ್ತೀಯಾ ಎಂದು ತಾಯಿಗೆ ಅವಾಜ್ ಹಾಕಿರುವ ಪುತ್ರನೊಬ್ಬ ಚರ್ಚಿನಲ್ಲಿರುವ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಬಾಣಸವಾಡಿ ಬಳಿಯಿರುವ ಕಮ್ಮನಹಳ್ಳಿಯಲ್ಲಿನ ಚರ್ಚಿನಲ್ಲಿ ನಡೆದಿದೆ.
ಕೇರಳ ಮೂಲದ ಟಾಮ್ ಮ್ಯಾಥ್ಯೂವ್ ಎಂಬಾತ ಈ ಉದ್ಧಟತನ ಮೆರೆದಿದ್ದಾನೆ. ಮನೆಯಲ್ಲಿಯೇ ದೇವರನ್ನು ಇಟ್ಟುಕೊಂಡು ಚರ್ಚಿಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕಿ, ಚರ್ಚಿನಲ್ಲಿದ್ದ ಹೂಕುಂಡ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ.
ಆರೋಪಿ ಮ್ಯಾಥ್ಯೂವ್ 30 ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದಾನೆ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿದ್ದಾನೆ. ನಿನ್ನೆ ಚರ್ಚಿಗೆ ಹೋದಾಗ ಈ ಗಲಾಟೆ ನಡೆದಿದೆ. ನಾನೇ ದೇವರು, ನೀವ್ಯಾಕೆ ಆ ದೇವರನ್ನು ಪೂಜಿಸುತ್ತೀರಾ ಎಂದು ಗಲಾಟೆ ಮಾಡಿದ್ದಾನೆ. ಸದ್ಯ ಮ್ಯಾಥ್ಯೂವ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥನಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಆತನ ತಾಯಿಯನ್ನೂ ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ: ಸಿಎಂ ಸಿದ್ದರಾಮಯ್ಯ
ಮೊದಲ ಬಾರಿ ಗೆದ್ದ ಶಾಸಕರು ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂದು ತಿಳಿದುಕೊಳ್ಳಲಿ! ಪ್ರತಾಪ್ ಸಿಂಹ ಟಾಂಗ್
https://www.vijayavani.net/wp-admin/post.php?post=1558498&action=edit