More

    ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ಬಿಜೆಪಿ ಶಾಸಕ ಚಂದ್ರಪ್ಪ ತೀವ್ರ ವಾಗ್ದಾಳಿ

    ಚಿತ್ರದುರ್ಗ; ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ದ
    ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಚಿವ ಸಿ.ಪಿ.ಯೊಗೀಶ್ವರ ವಿರುದ್ಧ  ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಯಾರೋ ಒಬ್ಬನು ಬಂದ, ಎಲ್ಲಿಂದಲೋ ಬಂದ ಇಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ಏನೋ ಹೇಳಿಕೆ ಕೊಟ್ಟ. ಈಗ ಅವನದೇ ಸಾಮ್ರಾಜ್ಯ ಎಂದು ಬಿಲ್ಡಪ್ ಕೊಡುತ್ತಿದ್ದಾನೆ ಎಂದರು.

    ಯೋಗೀಶ್ವರ್ ಒಬ್ಬ ಹುಚ್ಚ. ತಿನ್ನಲು ಕೂಳಿಲ್ಲದವನಿಗೆ ಹೋಳಿಗೆ ಕೊಟ್ಟರೆ ತಲೆತಿಕ್ಕಲು ಎಂಬಂತಾಗಿದೆ ಅವನ ಪರಿಸ್ಥಿತಿ. ಅವನಿಗೆ ತಿನ್ನಲು ಮುದ್ದೆ ಇರಲಿಲ್ಲ, ಪರಿಸ್ಥಿತಿ ಸರಿ ಇರಲಿಲ್ಲ ಸೋತಿದ್ದ ಯೊಗೀಶ್ವರ್ ರಾಮನಗರ ಉಸ್ತುವಾರಿ ವಹಿಸಿಕೊಂಡಿದ್ದ ಎಂದರು.

    ರಾಮನಗರಕ್ಕೆ ನಿಲ್ಲಿಸಿದ ಅಭ್ಯರ್ಥಿ ಪಲಾಯನ ಮಾಡಿದ್ದ. ಅನಿತಾ ಕುಮಾರಸ್ವಾಮಿ ವಿರುದ್ಧದ ಅಭ್ಯರ್ಥಿಯನ್ನು ಇವನೇ ಓಡಿಸಿದ್ದ. ಅಂಥವನಿಗೆ ನಮ್ಮ ಮುಖಂಡರು ಎಂಎಲ್ ಸಿ, ಮಂತ್ರಿ ಮಾಡಿದ್ದಾರೆ.
    ಸಿ.ಪಿ.ವೈ ನಮ್ಮ ಮುಂದೆ ಬಚ್ಚಾ ಅವನೇನು ದೊಡ್ಡ ಮನುಷ್ಯ ಅಂತ ನಾನು ಅವನ ಬಗ್ಗೆ ಮಾತಾಡಲಿ ಅವನು ಏನಾದರು ಹೇಳುವುದಿದ್ದರೆ ಹೇಳಲಿ ಜನ ಕಷ್ಟದಲ್ಲಿದ್ದಾರೆ. ಸಾವು ನೋವಿನ ಈ ಸಂದರ್ಭದಲ್ಲಿ
    ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಾವು ಕೆಲಸ ಮಾಡಬೇಕು ಎಂದರು.

    ಈ ಕಠಿಣ ಸಂದರ್ಭದಲ್ಲಿ ರಾಜಕೀಯ ಬಿಟ್ಟು
    ಒಟ್ಟಾಗಿ ಮಹಾಮಾರಿ ಕೊರೊನಾ ಓಡಿಸಬೇಕಿದೆ ಎಂದು ಶಾಸಕ ಚಂದ್ರಪ್ಪ ಹೇಳಿದರು.

    ಇದನ್ನೂ ಓದಿ; ಮೂಡುಬಿದಿರೆಯಲ್ಲಿ ಚಿನ್ನ ದರೋಡೆ; ಹತ್ಯೆಗೆ ಸಂಚು ಪ್ರಕರಣದಲ್ಲಿ11 ಮಂದಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts