More

    ಬಿಜೆಪಿ ನಾಯಕರದ್ದು ವಿಶಾಲ ಹೃದಯ ಎಂದು ಹೊಗಳಿದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್​

    ಚಿಕ್ಕಬಳ್ಳಾಪುರ: ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನನಗೆ ಮಂತ್ರಿ ಸ್ಥಾನ ಸಿಗುವ ನಂಬಿಕೆ ಇದೆ ಎಂದು ಶಾಸಕ ಕೆ. ಸುಧಾಕರ್​ ಹೇಳಿದರು.

    ಆರೂರು ಗ್ರಾಮದ ಬಳಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಸುಧಾಕರ್​ ಮಂತ್ರಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.

    ಸಚಿವ ಸಂಪುಟ ವಿಸ್ತರಣೆಯಾಗಲು ವಿಳಂಬ ಆಗುತ್ತಿರುವುದಕ್ಕೆ ನನ್ನ ಬೆಂಬಲಿಗು ಯಾರೂ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ನಮಗಾಗಿ 525 ಕೋಟಿ ರೂ.ನ ಮೆಡಿಕಲ್​ ಕಾಲೇಜು ಮಂಜೂರು ಮಾಡಿದ್ದಾರೆ. ದಿನಗಳು ಚೆನ್ನಾಗಿಲ್ಲ ಎಂದು ಇಷ್ಟು ದಿನ ವಿಸ್ತರಣೆ ಮಾಡಿರಲಿಲ್ಲ. ಈಗ ಎಲ್ಲವರೂ ಸರಿಯಾಗಿದೆ. ನೂರಕ್ಕೆ ನೂರರಷ್ಟು ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು.

    ಹಿರಿಯ ಶಾಸಕರು ತಮ್ಮ ಸಚಿವ ಸ್ಥಾನವನ್ನು ಕಿರಿಯ ಶಾಸಕರಿಗಾಗಿ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದು ಬಿಜೆಪಿಯವರು ಪಕ್ಷದ ತತ್ವ, ಸಿದ್ಧಾಂತ, ಹೈಕಮಾಂಡ್​ಗೆ ನಾಯಕರು ಕೊಡುವ ಬೆಲೆ. ಪದವಿ ಮುಖ್ಯವಲ್ಲ, ಪಕ್ಷ ಹಾಗೂ ಸರ್ಕಾರಕ್ಕೆ ಒಳಿತಾಗಲಿ ಎಂದು ಅಧಿಕಾರವನ್ನು ತ್ಯಾಗ ಮಾಡುತ್ತೇವೆ ಎಂದು ಹೇಳಿರೋದು ಅವರೆಲ್ಲರದ್ದು ವಿಶಾಲ ಹೃದಯ ಎಂದು ಹೊಗಳಿದರು.

    ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್​.ಡಿ.ಕುಮಾರಸ್ವಾಮಿಯವರು ಪದೇಪದೆ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಾಜಿ ಸಿಎಂಗಳಿಗೆ ಸಿಎಂ ಕುರ್ಚಿ ಮೇಲೆ ಮೋಹ ಇದಕ್ಕೆ ಕಾರಣ ಎಂದು ಸುಧಾಕರ್ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts