More

    ಜ.29ರಂದು ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಯಡಿಯೂರಪ್ಪಗೆ ಹೈಕಮಾಂಡ್​ ಸಂದೇಶ; ಬಿಎಸ್​ವೈ ಭೇಟಿಯಾದ ಬಿ.ಎಲ್.​ ಸಂತೋಷ

    ಬೆಂಗಳೂರು: ಜನವರಿ 29ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ನೀಡಿರುವ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರ್​ಎಸ್​ಎಸ್​ ಮುಖಂಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ತಿಳಿಸಿದ್ದಾರೆ.

    ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆ ಧವಳಗಿರಿಯಲ್ಲಿ ಭೇಟಿಯಾದ ಅವರು, ಹೈಕಮಾಂಡ್ ಸಂದೇಶವನ್ನು ತಿಳಿಸಿದ್ದಾರೆ. ಹೈಕಮಾಂಡ್​ನಿಂದ ಈ ಸಂದೇಶ ಬಂದ ಬಳಿಕ ಜ್ಯೋತಿಷಿಗಳ ಸಲಹೆಯನ್ನು ಮುಖ್ಯಮಂತ್ರಿ ಪಡೆದಿದ್ದಾರೆ.

    ಜನವರಿ 29ರಂದು ಸಂಪುಟ ವಿಸ್ತರಣೆ ಮಾಡಲು ಯಾವುದೇ ತೊಂದರೆ ಇಲ್ಲ. ಸಂಪುಟ ವಿಸ್ತರಣೆ ಮಾಡಲು ಇದು ಸೂಕ್ತ ಸಮಯ ಎಂದು ಜ್ಯೋತಿಷಿಗಳೂ ಸಲಹೆ ನೀಡಿದ್ದಾರೆ.

    ಜನವರಿ 29 ವಸಂತ ಪಂಚಮಿಯಾಗಿದ್ದು ವಿಶೇಷ ದಿನವಾಗಿದೆ. ಅಂದು ಬೆಳಗ್ಗೆ 10.45ರ ಬಳಿಕ ರಾಜಯೋಗ ಆರಂಭವಾಗಲಿದೆ. ಈ ವೇಳೆ ಸಂಪುಟ ವಿಸ್ತರಣೆ ಮಾಡುವಂತೆ ಜ್ಯೋತಿಷಿಗಳು ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

    ಹೈಕಮಾಂಡ್ ಕೂಡ ಜನವರಿ 29ರಂದೇ ಸಂಪುಟ ವಿಸ್ತರಣೆ ಮಾಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಪಾಲರ ಸಮಯ ಕೇಳಲು ನಿರ್ಧರಿಸಿದ್ದಾರೆ. (ದಿಗ್ವಿಜಯ ನ್ಯೂಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts