ಬೆಂಗಳೂರು: ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್ನಲ್ಲಿದ್ದ ವೃದ್ಧ ತನ್ನ ಹುಟ್ಟಿದ ದಿನ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿದ್ದ. ಆದರೆ ಆತ ಹೃದಯಾಘಾತದಿಂದ ಮೃತಪಟ್ಟ.
ಗಾಯತ್ರಿ ನಗರದಲ್ಲಿದ್ದ ನಿರಾಶ್ರಿತ ವೃದ್ಧನನ್ನು ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿಜಯನಗರದ ನಿರಾಶ್ರಿತರ ಕೇಂದ್ರದಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಇಂದು ವೃದ್ಧನ ಹುಟ್ಟಿದ ದಿನ. ಹೀಗಾಗಿ ಆತ ನಿರಾಶ್ರಿತ ಕೇಂದ್ರದ ವಾರ್ಡನ್ಗೆ ಪೂರಿ ಮಾಡಿಸಿಕೊಡುವಂತೆ ಕೋರಿದ್ದರು. ಅಲ್ಲದೆ ಸಂಜೆ ಕೇಕ್ ತರಿಸಿ ಕತ್ತರಿಸಿ ಎಲ್ಲರಿಗೂ ಹಂಚಬೇಕು ಎಂದು ಹೇಳಿದ್ದರು.
ಇದಾದ 2 ತಾಸಿನಲ್ಲಿ ವೃದ್ಧ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಅನಾಥವಾಗಿ ಬಿದ್ದಿರುವ ಶವ: ನಿರಾಶ್ರಿತರ ಕ್ವಾರಂಟೈನ್ ಕೇಂದ್ರದಲ್ಲಿ ಮೃತಪಟ್ಟಿರುವ ವೃದ್ಧನ ಶವ ಅನಾಥವಾಗಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ. ಕೇಂದ್ರದಲ್ಲಿ 40 ಮಂದಿ ನಿರಾಶ್ರಿತರು ಇದ್ದಾರೆ.
ಪೂರ್ವಸೂಚನೆ ನೀಡದೆ ಉದ್ಯೋಗಿಗಳನ್ನು ವಜಾಗೊಳಿಸಿದ ಇ-ಕಾಮರ್ಸ್ ಕಂಪನಿ, ಕೆಲಸ ಕಳೆದುಕೊಂಡವರ ಕಣ್ಣೀರು