More

    ಬೇಲೂರಿಗೆ ಆಗಮಿಸಿದ ಬೈಕ್ ಜಾಥಾ

    ಬೇಲೂರು : ಸಂವಿಧಾನ ಉಳಿಸಿ ಬೌದ್ಧ ಧರ್ಮ ಬೆಳೆಸಿ ಘೋಷವಾಕ್ಯದೊಂದಿಗೆ ಮಹಾರಾಷ್ಟ್ರದ ನಾಗಪುರದಿಂದ ಹೊರಟು ಸಂಚರಿಸುತ್ತಿರುವ ಸಮತ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿ ಕಾರ್ಯಕರ್ತರ ಬೈಕ್ ಜಾಥಾ ಸೋಮವಾರ ಬೇಲೂರು ಪಟ್ಟಣಕ್ಕೆ ಆಗಮಿಸಿತು.
    ಗಾಂಧಾರ ಬುದ್ಧ ವಿಹಾರದ ಮುಖಂಡರು ಪಟ್ಟಣದಲ್ಲಿ ಸೋಮವಾರ ಸ್ವಾಗತಿಸಿದರು. ಬಳಿಕ ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಸಮತಾ ಸೈನಿಕ ದಳ ಹಾಗೂ ಭಾರತ ರಾಷ್ಟ್ರ ಅಭಿಯಾನ ಸಮಿತಿ ಮುಖಂಡ ನಾಗಪುರದ ಸುರೇಂದ್ರ ಬೆಳಾವೆ ಮಾತನಾಡಿ, ಡಾ.ಅಂಬೇಡ್ಕರ್ ಅವರ ಆಶಯದಂತೆ ದೇಶದ ಮೂಲ ನಿವಾಸಿಗಳಿಗೆ ಬೌದ್ಧ ಧರ್ಮದ ಆಚರಣೆ ಹಾಗೂ ಸಂವಿಧಾನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ನಮ್ಮ ಜಾಥಾ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ರಾಜ್ಯದಲ್ಲಿ ಸಂಚರಿಸುತ್ತಿದ್ದು, ಡಿ.21ರಂದು ತಮಿಳುನಾಡಿನ ರಾಮೇಶ್ವರದಲ್ಲಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

    ಗಾಂಧಾರ ಬುದ್ಧ ವಿಹಾರದ ಉಪಾಧ್ಯಕ್ಷ ಮೊಗಸಾವರ ಮಂಜುನಾಥ್, ಸಮಿತಿಯ ಸುರಭ ಬಾರಮತೆ, ಪ್ರತೀಕ್ ಸೊಂಟಕ್ಕೆ, ಅಭಯ್ ಲೋಕಂಡೆ, ಗಾಂಧಾರ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳಾದ ರವಿ ರಾಯಪುರ, ಶಿವಣ್ಣ, ವಕೀಲ ಕುಮಾರ್ ಗುಪ್ತ, ಗಂಗಾಧರ್, ಆಶಾ ಮಂಜುನಾಥ್, ವಿರೂಪಾಕ್ಷ, ರಘು ಶೆಟ್ಟಿಗೆರೆ, ರಂಗಸ್ವಾಮಿ, ಹರೀಶ್, ಎಚ್.ಡಿ.ರಮೇಶ್, ಪ್ರವೀಣ್, ಪ್ರೇಮಾ ಗುರುರಾಜ್, ಕುಮಾರ್ ಕೌರಿ, ಲಿಖಿತ್, ಕಾರ್ತಿಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts