ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೊಪಿಯ ಬಗ್ಗೆ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೂರು ಡೌಟ್ಗಳನ್ನು ಎತ್ತಿ ಹಿಡಿದಿದ್ದಾರೆ.
ಅಮೂಲ್ಯಾ ಲಿಯೋನಾ ಮೂಲತಃ ಹಿಂದೂ ಧರ್ಮದವಳಾಗಿದ್ದು ಆಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎನ್ನಲಾಗಿದೆ. ಮತಾಂತರವಾಗಿರುವ ಆಕೆಗೆ ಕ್ರಿಶ್ಚಿಯನ್ ಸೇರಿ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳ ಬೆಂಬಲವಿದೆ ಎಂದು ಮಾಹಿತಿ ಲಭಿಸಿದೆ.
ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದವಳು. ಆ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಿರುವುದರಿಂದ ಆಕೆಯೂ ಸಹ ನಕ್ಸಲರೊಂದಿಗೆ ನಂಟು ಹೊಂದಿರಬಹುದು ಎನ್ನುವ ಅನುಮಾನವೂ ಇದೆ.
ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಈಕೆಗೆ ಮೋದಿ ಮತ್ತು ಅಮಿತ್ ಷಾರನ್ನು ವಿರೋಧಿಸುವ ಟೀಂಗಳ ಬೆಂಬಲವೂ ಇತ್ತು. ಇದರ ಜತೆಗೆ ರಾಜಕೀಯ ಪಕ್ಷಗಳ ಕೈವಾಡವೂ ಇರಬಹುದು ಎನ್ನುವ ಅನುಮಾನವಿದ್ದು, ಈ ಮೂರು ಅನುಮಾನಗಳ ಜಾಡು ಹತ್ತಿರುವುದಾಗಿ ಭಾಸ್ಕರ್ ರಾವ್ ತಿಳಿಸಿದ್ದಾರೆ. ಈ ಮಾಹಿತಿಗಳು ಭಾಸ್ಕರ್ ರಾವ್ ಅವರು ರಾಜ್ಯ ಗೃಹ ಮಂತ್ರಿಗಳಿಗೆ ನೀಡಿರುವ ವರದಿಯಿಂದಾಗಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)