ಭರಮಸಾಗರ: ಚೌಲೀಹಳ್ಳಿ ಗೊಲ್ಲರಹಟ್ಟಿ ನಿವಾಸಿ, ಚಿತ್ರದುರ್ಗ ಶ್ರೀಕೃಷ್ಣ ಯಾದವ ಮಠದ ಶ್ರೀ ಯಾದವಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಶೇಷಮ್ಮ (70) ಶನಿವಾರ ನಿಧನ ಹೊಂದಿದರು.
ಪತಿ ಕರಿಯಪ್ಪ ಹಾಗೂ ಯಾದವಾನಂದ ಶ್ರೀ ಸೇರಿ ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಚೌಲೀಹಳ್ಳಿ ಗೊಲ್ಲರಹಟ್ಟಿಯಲ್ಲಿ ಭಾನುವಾರ ಮಧ್ಯಾಹ್ನ 12ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.