More

    ಕೆರೆ ಕಾಮಗಾರಿ ತ್ವರಿತಗೊಳಿಸಿ

    ಭರಮಸಾಗರ: ಮುಂದಿನ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಭರಮಸಾಗರದಲ್ಲಿ ನಡೆಯಲಿದ್ದು, ಭರಮಣ್ಣನಾಯಕನ ದೊಡ್ಡಕೆರೆ, ಚಿಕ್ಕಕೆರೆಗಳು ಪ್ರಮುಖ ಆಕರ್ಷಣೆಯಾಗಲಿವೆ. ಅದಕ್ಕಾಗಿ ಕಾಮಗಾರಿ ತ್ವರಿತಗೊಳಿಸಿ ಎಂದು ಸಿರಿಗೆರೆ ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೋತ್ಸವದಲ್ಲಿ ಗುರುವಾರ ಪಾಲ್ಗೊಂಡು ಸಿರಿಗೆರೆಗೆ ತೆರಳುವ ಮಾರ್ಗ ಮಧ್ಯೆ ಇಲ್ಲಿನ ದೊಡ್ಡಕೆರೆಗೆ ಭೇಟಿ ನೀಡಿ ಏರಿ ಕಾಮಗಾರಿ ವೀಕ್ಷಿಸಿದರು. ಕೆರೆಯ ಯೋಜನೆ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದರು.

    ಶಾಸಕ ಎಂ.ಚಂದ್ರಪ್ಪ ಮಾತನಾಡಿ, ದೊಡ್ಡಕೆರೆ ಬಿರುಕು ಸರಿಪಡಿಸಲು ಈಗಾಗಲೇ 5 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯ ಸುತ್ತಲು ಉತ್ತಮ ರಸ್ತೆ ದೀಪ ಮೂಲಕ ಕೆರೆ ಅಭಿವೃದ್ಧಿಗೊಳಿಸುತ್ತೇನೆ ಎಂದು ಹೇಳಿದರು.

    ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ಆಚರಣೆ ಮಾಡುವುದಾಗಿ ಘೋಷಣೆ ಹಿನ್ನೆಲೆಯಲ್ಲಿ ಶ್ರೀಗಳನ್ನು ಗ್ರಾಮಸ್ಥರು ಗೌರವಿಸಿದರು. ಮುಖಂಡರಾದ ಡಿ.ವಿ.ಪ್ರವೀಣ್ ಕುಮಾರ್, ಶೈಲೇಶ್, ಕಲ್ಲೇಶ್, ಶಶಿಪಾಟೀಲ್, ವಿರೂಪಾಕ್ಷಪ್ಪ, ಲೋಲಾಕ್ಷಮ್ಮ, ನಿರ್ಮಲಾ, ಶಾಂತಾ, ಕೋಗುಂಡೆ ಮಂಜಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts