ಭರಮಸಾಗರ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಹಾಗೂ ಕಾಂಗ್ರೆಸ್ ಪಕ್ಷ ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು.
ವೀಕ್ಷಕಿ ಗೀತಾ, ಮುಖಂಡರಾದ ಎಚ್.ಎನ್.ತಿಪ್ಪೇಸ್ವಾಮಿ, ತುರುವನೂರು ಮಲ್ಲೇಶ್, ತುರುವನೂರು ಚನ್ನೇಶ್, ಎನ್.ಎಚ್.ಮಂಜುನಾಥ್, ಕೆ.ಟಿ.ಸಿ.ಮಂಜುನಾಥ್, ಓಂಕಾರಪ್ಪ, ಜಯಣ್ಣ ಇತರರಿದ್ದರು.