More

    ಎಸಿಬಿ ಬಲೆಗೆ ಬಿದ್ದ ಬಿಇಒ ಕಚೇರಿ ವ್ಯವಸ್ಥಾಪಕ

    ಶಿಗ್ಗಾಂವಿ: ಸಹಶಿಕ್ಷಕನ ವರ್ಗಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಎಸಿಬಿ ಬಲೆಗೆ ಬಿದ್ದ ಘಟನೆ ಪಟ್ಟಣದ ಬಿಇಒ ಕಚೇರಿಯಲ್ಲಿ ಸೋಮವಾರ ನಡೆದಿದೆ.

    ಕಚೇರಿ ವ್ಯವಸ್ಥಾಪಕ ಸುರೇಶ ರೊಡ್ಡನ್ನವರ ಎಸಿಬಿ ಬಲೆಗೆ ಬಿದ್ದ ನೌಕರ. ಶಿಗ್ಗಾಂವಿ ಗಾಂಧಿನಗರದ ನಂ. 3ರ ಶಾಲೆಯ ಸಹಶಿಕ್ಷಕ ಹನಮಂತಪ್ಪ ಹಳ್ಳೆಪ್ಪನವರ ಅವರಿಂದ 3 ಸಾವಿರ ರೂಪಾಯಿ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    ವರ್ಗಾವಣೆ ಕೋರಿದ್ದ ಸಹಶಿಕ್ಷಕ ಹನಮಂತಪ್ಪ ಬರಮಪ್ಪ ಹಳ್ಳೆಪ್ಪನವರ ಅವರಿಗೆ 4 ಸಾವಿರ ರೂಪಾಯಿ ಲಂಚ ನೀಡುವಂತೆ ಸುರೇಶ ರೊಡ್ಡನ್ನವರ ಬೇಡಿಕೆಯಿಟ್ಟಿದ್ದ. ಈ ಕುರಿತು ಸಹಶಿಕ್ಷಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಂಚದ ಹಣ ಸ್ವೀಕರಿಸುವಾಗ ದಾಳಿ ನಡೆಸಲಾಗಿದೆ.

    ಬಂಧಿತ ನೌಕರ ಸುರೇಶ ರೊಡ್ಡನ್ನವರ ಸವಣೂರ ತಾಲೂಕಿನ ಹತ್ತಿಮತ್ತೂರ ಗ್ರಾಮದ ನಿವಾಸಿಯಾಗಿದ್ದು, ಹುಬ್ಬಳ್ಳಿಯ ಮಂಜುನಾಥ ನಗರದ ವಾಸವಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಶಿಗ್ಗಾಂವಿ ಬಿಇಒ ಕಚೇರಿಯಲ್ಲಿ ವ್ಯವಸ್ಥಾಪಕನಾಗಿದ್ದ. ಈ ಮೊದಲು ಮುಂಡರಗಿ ಹಾಗೂ ಹಾವೇರಿ ಡಿಡಿಪಿಐ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾನೆ.

    ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ, ಸಿಪಿಐ ಎಸ್.ಕೆ. ಪಟ್ಟಣಕೊಡಿ, ಸಿಪಿಐ ಪ್ರಭಾವತಿ ಶೇತಸನದಿ, ಸಿಬ್ಬಂದಿ ವೆಂಕಟೇಶ ಹುಲಿಹಳ್ಳಿ, ಬಿ.ಎಸ್. ಕರಡನ್ನವರ, ಎಸ್.ಎನ್. ಕಡಕೋಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts