More

    ಕೇರಳಾದಿಂದ ರೆಮ್ಡಿಸಿವಿರ್​ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ: ಮೂವರ ಬಂಧನ

    ಬೆಂಗಳೂರು: ಕೇರಳದಿಂದ ರೆಮ್ಡಿಸಿವಿರ್​ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಸಂಜೀವ್ ಕುಮಾರ್ (32), ಪ್ರತೀಕ್ (37) ಹಾಗೂ ಅಭಿಜಿತ್ (20) ಬಂಧಿತ ಆರೋಪಿಗಳು. ದಂಧೆಯ ಬಗ್ಗೆ ಮಾಹಿತಿ ಪಡೆದು ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಸಂಪರ್ಕಿಸಿ ದಂಧೆಯನ್ನು ಬಯಲಿಗೆ ಎಳದಿದ್ದಾರೆ.

    ಕೇರಳಾದಿಂದ ರೆಮ್ಡಿಸಿವಿರ್​ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ: ಮೂವರ ಬಂಧನ

    ಇನ್ಸ್​ಪೆಕ್ಟರ್​ ಎರ್ರಿಸ್ವಾಮಿ ನೇತೃತ್ವದ ತಂಡ ದಾಳಿ ಮಾಡಿತ್ತು. 1 ವಯಲ್ ಇಂಜೆಕ್ಷನ್​ಗೆ 10 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದರು. ಅಭಿಜಿತ್ ಎಂಬಾತನ ಬಳಿ ಇಂಜೆಕ್ಷನ್ ಕಲೆಕ್ಟ್ ಮಾಡಿಕೊಳ್ಳುವಂತೆ ತಿಳಿಸಿದ್ದರು. ಇಂಜೆಕ್ಷನ್ ಪಡೆಯುವ ನೆಪದಲ್ಲಿ ತೆರಳಿ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರಿಂದ 25 ವಯಲ್ಸ್ ರೆಮ್ಡಿಸಿವಿರ್ ಇಂಜಕ್ಷನ್​ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ದೇವಸ್ಥಾನದ ಮುಂದೆ ಜನಜಾತ್ರೆ: ಕೋವಿಡ್ ನಿಯಮ‌ ಉಲ್ಲಂಘಿಸಿದ ಅರ್ಚಕರ ವಿರುದ್ಧ ಪ್ರಕರಣ ದಾಖಲು

    ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೋವಿಡ್​ ಸೋಂಕಿತೆ ಸಾವು

    ಹನಿಟ್ರ್ಯಾಪೋ? ಬ್ಲ್ಯಾಕ್​ಮೇಲೋ?: ಯಾರಿಗೆ ಉರುಳಾಗುತ್ತೆ ಅಶ್ಲೀಲ ಸಿಡಿ ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts