ಇಡೀ ಜಗತ್ತನ್ನೇ ಆವರಿಸಿರುವ ಕರೊನಾ ಭೀತಿಯಿಂದಾಗಿ ಮನೆಯಿಂದ ಹೊರಬರಲು ಜನ ಭಯ ಪಡುವಂತಾಗಿದೆ. ಸಭೆ, ಸಮಾರಂಭಗಳಿಗೂ ಬ್ರೇಕ್ ಬಿದ್ದಿದೆ. ನಿಗದಿಯಂತೆ ಅದ್ದೂರಿಯಾಗಿ ನೆರವೇರಬೇಕಿದ್ದ ಬಹುತೇಕ ಮದುವೆಗಳು ಲಾಕ್ಡೌನ್ನಿಂದಾಗಿ ಸರಳವಾಗಿ ನೆರವೇರುತ್ತಿವೆ. ಇದೇ ಕಾರಣಕ್ಕೆ 3 ದಿನ ಅದ್ದೂರಿಯಾಗಿ ನಡೆಯಬೇಕಿದ್ದ ಬೆಂಗಳೂರು ಮೂಲದ ಪೈಲಟ್ವೊಬ್ಬರ ಮದುವೆ ಗುರುಗ್ರಾಮ್ನಲ್ಲಿ 2 ಗಂಟೆಯಲ್ಲೇ ಮುಗಿದೆ. ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟ ಕ್ಷಣವನ್ನು ವರನ ತಂದೆ-ತಾಯಿ ಮತ್ತು ಸಂಬಂಧಿಕರು ಆನ್ಲೈನ್ನಲ್ಲೇ ಕಣ್ತುಂಬಿಕೊಂಡು ಶುಭ ಹಾರೈಸಿದ್ದಾರೆ.
ಇದನ್ನೂ ಓದಿರಿ ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ನೆಲದ ಮೇಲೆ ಮಂಡಿಯೂರಿ ಕುಳಿತುಬಿಟ್ಟರು ಇವರು…
ಇಂಡಿಗೋ ವಿಮಾನದ ಪೈಲಟ್, ಬೆಂಗಳೂರು ಮೂಲದ ಸಮೀರ್ ವರ್ಮಾ(28) ಜತೆ ಅಕ್ಸೆಂಚರ್ ಕಂಪನಿ ಉದ್ಯೋಗಿ ಆಯುಷಿ ಕಟಾರಿಯಾ(27) ಮದುವೆ ಏ.17ರಂದು ನಿಶ್ಚಯವಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ರೋಹಿತ್ ವರ್ಮಾ ಮತ್ತು ಕಿರಣ್ ವರ್ಮ ದಂಪತಿ ಪುತ್ರ ಸಮೀರ್. ಆಯುಷಿ ಮತ್ತು ಅವಳ ಕುಟುಂಬ, ಸಮೀರ್ ಗುರುಗ್ರಾಮ್ನಲ್ಲಿ ನೆಲೆಸಿದೆ.
ಸಮೀರ್ ಮತ್ತು ಆಯುಷಿ ಮದುವೆಯನ್ನು ಮೂರು ದಿನ ಅದ್ದೂರಿಯಾಗಿ ನಡೆಸಲು ಲಾಕ್ಡೌನ್ ಘೋಷಣೆಗೂ ಮುನ್ನವೇ ವಧುವಿನ ಮನೆಯವರು ಸಿದ್ಧತೆ ಮಾಡಿಕೊಂಡಿದ್ದರು. ದೆಹಲಿಯ ರೆಸಾರ್ಟ್ನಲ್ಲಿ ಮದುವೆ, ವರನ ಸ್ವಗೃಹ ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ಪೂಜಾ ಕಾರ್ಯ ನಿಗದಿಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಈ ಮದುವೆಗೆ ಆಸ್ಟ್ರೇಲಿಯಾ, ಬೆಲ್ಜಿಯಂ ದೇಶದ ಅತಿಥಿಗಳು ಸೇರಿ ನೂರಾರು ಸಂಬಂಧಿಕರು ಭಾಗವಹಿಸುತ್ತಿದ್ದರು.
ಇದನ್ನೂ ಓದಿರಿ ಎಟಿಎಂ ಒಳಗೆ ಹಾವಿದೆ… ಜೋಕೆ!
ಸಮೀರ್ ವಾಸಿಸುವ ಸ್ಥಳದಿಂದ ಆಯುಷಿ ಮನೆ ಸಮೀಪದಲ್ಲೇ ಇದೆ. ಮೇ 1ರ ಬಳಿಕ ಲಾಕ್ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂಬುದನ್ನು ಅರಿತ ಎರಡೂ ಕುಟುಂಬಸ್ಥರು ಸಂಬಂಧಿಕರ ಅನುಪಸ್ಥಿತಿಯಲ್ಲೇ ಮೇ 6ರಂದು ಮದುವೆ ನೆರವೇರಿಸಲು ನಿರ್ಧರಿಸಿದರು. ಅದರಂತೆ ಮದುವೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಅಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಗುರುಗ್ರಾಮ್ನಲ್ಲಿ ಮದುವೆ ನೆರವೇರಿತು. ಈ ಮದುವೆಯಲ್ಲಿ ವಧು-ವರ, ವಧುವಿನ ಪಾಲಕರು, ಫೋಟೋಗ್ರಾಫರ್ ಮತ್ತು ಪುರೋಹಿತರು ಮಾತ್ರವೇ ಭಾಗವಹಿಸಿದ್ದರು.
ಇದನ್ನೂ ಓದಿರಿ ಗುಜರಾತ್ಗೆ ಹೋಗಿ ಬಂದ 14 ತಬ್ಲಿಘಿ ಸೇರಿ 15 ಜನರಲ್ಲಿ ಸೋಂಕು, ಬೆಚ್ಚಿಬಿದ್ದ ಮುಧೋಳ
ಬೆಂಗಳೂರು, ಚಂಡಿಗಢ, ಫರಿದಾಬಾದ್, ನೋಯಿಡಾ, ಜೈಪುರ, ಪುಣೆ, ಸಿಂಗಾಪುರ ಸೇರಿದಂತೆ ಇತರೆಡೆಯಿಂದ ಸುಮಾರು 35 ಸಂಬಂಧಿಕರು ಆನ್ಲೈನ್ ಮುಖಾಂತರ ಈ ಮದುವೆಯಲ್ಲಿ ಭಾಗವಹಿಸಿದ್ದರು. ಸಿಂಗಾಪುರದಲ್ಲಿರುವ ನನ್ನ ದೊಡ್ಡ ಮಗ, ಸೊಸೆ ಮತ್ತು ಮೊಮ್ಮಗ ಕೂಡ ವಿಡಿಯೋ ಕಾಲ್ ಮುಖಾಂತರವೇ ಸಮೀರ್ ಮದುವೆ ಕಣ್ತುಂಬಿಕೊಂಡಿತು. ಚಿಕ್ಕಪ್ಪನ ಮದುವೆ ನೋಡಲು ನನ್ನ ಮೊಮ್ಮಗ ಪರದಗೆ ಅಂಟಿಕೊಂಡಿದ್ದ. ನಾವು ಕೂಡ ಮದುವೆ ಹೋಗಲು ಆಗಲಿಲ್ಲ ಎಂದು ಸಮೀರ್ ತಾಯಿ ಕಿರಣ್ ವಿವರಿಸಿದರು.
ನವಜೀವನಕ್ಕೆ ಕಾಲಿಟ್ಟ ದಂಪತಿಗೆ ಆನ್ಲೈನ್ನಲ್ಲೇ ವರನ ಪಾಲಕರು ಶುಭಕೋರಿದರು.
ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲೇ ವರನ ತಾಯಿ ವಧುವನ್ನ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿಸಿದರು. ಅತ್ತೆ ಆರತಿ ಮಾಡಿ ಮನೆಗೆ ಆಹ್ವಾನಿಸುತ್ತಿದ್ದ ವೇಳೆ ಸಹಜವಾಗಿ ಟೆನ್ಷನ್ ಆಗಿದ್ದೆ. ಇದೊಂಥರಾ ಒಳ್ಳೆಯ ಅನುಭವ ಎಂದು ಆಯುಷಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ ತಬ್ಲಿಘಿಗಳ ಬೆನ್ನಿಗೆ ನಿಂತ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಆಕ್ರೋಶ