More

    ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ; ಬೆಂಗಳೂರಿನ ಪ್ರತೀಕ್, ಸುಹಿನಾ ಚಾಂಪಿಯನ್

    ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾ ಸಮುಚ್ಚಯದಲ್ಲಿ ಕಳೆದ ಆರು ದಿನಗಳಿಂದ ನಡೆದ ಯೊನೆಕ್ಸ್ ಸನ್‌ರೈಸ್ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಬುಧವಾರ ಮುಕ್ತಾಯಗೊಂಡಿತು.

    ಇದನ್ನೂ ಓದಿರಿ:ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್; ಕೆ.ಶ್ರೀಕಾಂತ್ ರನ್ನರ್‌ಅಪ್‌ಗೆ ತೃಪ್ತಿ

    15 ವರ್ಷದ ವಿಭಾಗ

    ಪ್ರತೀಕ್ ಕೌಂಡಿಲ್ಯ (ಬಾಲಕ) ಹಾಗೂ ಸುಹಿನಾ ರಾಯ್ (ಬಾಲಕಿ) ಮತ್ತು 17 ವರ್ಷದ ವಿಭಾಗದಲ್ಲಿ ಅವಿ ಬಸಕ್ (ಬಾಲಕ) ಹಾಗೂ ಜೇಡ್ ಅನಿಲ್ (ಬಾಲಕಿ) ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು.

    ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಪ್ರತೀಕ್ ಕೌಂಡಿಲ್ಯ, ಪ್ರಣವ್ ಎಂ. ಅವರನ್ನು (3-0) ಸೆಟ್ ನಿಂದ 18-21, 21-14, 21-16 ಅಂಕಗಳಿಂದ ಮಣಿಸಿದರು. ಬಾಲಕಿಯರ ವಿಭಾಗದಲ್ಲಿ ಸುಹಿನಾ ರಾಯ್, ಅದಿತಿ ದೀಪಕ್ ರಾಜ್ ವಿರುದ್ಧ ನೇರ ಸೆಟ್‌ಗಳಿಂದ 21-13, 23-21 ಅಂಕಗಳಿಂದ ಗೆಲುವು ಸಾಧಿಸಿದರು.

    17 ರೊಳಗಿನ ಬಾಲಕರ ವಿಭಾಗ

    15 ವರ್ಷದವರ ವಿಭಾಗದಲ್ಲಿ ಜಯಗಳಿಸಿದ ಪ್ರತೀಕ್ ಕೌಂಡಿಲ್ಯ ಈ ವಿಭಾಗದಲ್ಲಿ ಅವಿ ಬಸಕ್ ವಿರುದ್ಧ ನೇರ ಸೆಟ್‌ಗಳಿಂದ (ಅಂಕಗಳು 17-21 13-21) ಸೋಲು ಕಂಡರು. ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಜೇಡ್ ಅನಿಲ್ ಅವರು ಬೆಂಗಳೂರಿನ ಸುಹಿನಾ ರಾಯ್ ಅವರನ್ನು ನೇರ ಸೆಟ್‌ಗಳಲ್ಲಿ 21-18, 21-15 ಅಂಕಗಳಿಂದ ಸೋಲಿಸಿದರು.

    ಇನ್ನು ಮಿಶ್ರ ಡಬಲ್ಸ್ನಲ್ಲಿ 15 ವರ್ಷದೊಳಗಿನ ಅಮಿತ್ ರಾಜ್ ಮತ್ತು ಇಷಿಕ ಕಶ್ಯಪ್ ಅವರು ಪ್ರದ್ಯುಮ್ನ ಮತ್ತು ಲಕ್ಷೃ ರಾಜೇಶ್ ಅವರನ್ನು 2-1 ಸೆಟ್ (ಅಂಕಗಳು 16-21, 21-14, 21-10) ನಿಂದ ಮಣಿಸಿದರು. 17 ವರ್ಷದೊಳಗಿನ ಸುಮಿತ್ ಎ.ಆರ್ ಮತ್ತು ಅನ್ವಿತಾ ವಿಜಯ್ ಅವರು ಸಿದ್ಧಾರ್ಥ ಗುನ್ಟೂರಿ ಹಾಗೂ ಮೌನಿತಾ ಎ.ಎಸ್. ವಿರುದ್ಧ ನೇರ ಸೆಟ್‌ಗಳಲ್ಲಿ ಅಂದರೆ 21-13, 21-13 ಅಂಕಗಳಿಂದ ಜಯ ಸಾಧಿಸಿದರು.

    15 ವರ್ಷದೊಳಗಿನ ಬಾಲಕರ ವಿಭಾಗದ ಡಬಲ್ಸ್ನಲ್ಲಿ ಬೆಂಗಳೂರಿನ ಎಸ್.ಪುನೀತ್ ಮತ್ತು ಎಸ್. ಪವನ್ ಸಹೋದರರ ವಿರುದ್ಧ ಹಾರ್ದಿಕ್ ದಿವ್ಯಾಂಶ ಮತ್ತು ನಟರಾಜ್ ಅವರು 2-1 ಸೆಟ್‌ನಿಂದ (ಅಂಕಗಳು 15-21,21-17,21-18) ಜಯ ಸಾಧಿಸಿದರು.

    17 ವರ್ಷದೊಳಗಿನ ಬಾಲಕರ ಡಬಲ್ಸ್ ಪಂದ್ಯದಲ್ಲಿ ಕ್ರಿಸ್ ಅಂಜೆನ್ , ಸುಮಿತ್ ಎ.ಆರ್ ಹಾಗೂ ಕ್ಷಿತಿಜ್ ದೀಪಕ್, ಸಂಕೀರ್ತ್.ಪಿ ಅವರನ್ನು ನೇರ ಸೆಟ್‌ಗಳಿಂದ ಅಂದರೆ 21-17, 21-9 ಅಂಕಗಳಿಂದ ಮಣಿಸಿದರು. ಬಾಲಕಿಯರ ವಿಭಾಗದಲ್ಲಿ ದಿಯಾ ಭೀಮಯ್ಯ ಮತ್ತು ಜೇಡ್ ಅನಿಲ್ ಅವರು ವೃದ್ಧಿ ಪೊನ್ನಮ್ಮ ಹಾಗೂ ಅದಿತಿ ದೀಪಕ್‌ರಾಜ್ ಅವರನ್ನು ನೇರ ಸೆಟ್‌ನಲ್ಲಿ 21-16, 21-19 ಅಂಕಗಳಿಂದ ಮಣಿಸಿದರು.

    ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಜಿಲ್ಲಾ ಅಸೋಸಿಯೇಷನ್ ಮತ್ತು ಜಿಲ್ಲಾ ಆಡಳಿತದ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. 2017ರ ನಂತರ ಎರಡನೇ ಬಾರಿಗೆ ರಾಜ್ಯಮಟ್ಟದ ಪಂದ್ಯಾವಳಿ ಬಳ್ಳಾರಿಯಲ್ಲಿ ಆಯೋಜಿಸಿದ್ದು ವಿಶೇಷವಾಗಿತ್ತು. ಪಂದ್ಯಾವಳಿಯಲ್ಲಿ 420 ಆಟಗಾರರು, 742 ಪಂದ್ಯಗಳನ್ನು ಆರು ಅಂಕಣಗಳಲ್ಲಿ ಆಡಿದರು.

    ಸುಪ್ರ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ.ಸಿಂಗ್, ಜೈರಾಜ್ ಸ್ಟೀಲ್ನ ಜನರಲ್ ಮ್ಯಾನೇಜರ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಹೊಸಪೇಟೆಮಠ, ಕಾರ್ಯದರ್ಶಿ ರಾಜೇಶ್, ಜಿಲ್ಲಾ ಅಧ್ಯಕ್ಷ ಎಂ.ಅಹಿರಾಜ್, ಉಪಾಧ್ಯಕ್ಷ ರಾಮ್‌ದೂತ್ ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts