ಬಳ್ಳಾರಿ: ನಗರ ಹೊರವಲಯದ 34ನೇ ವಾರ್ಡ್ನ ಭತ್ರಿಯಲ್ಲಿ ನಡೆದಿರುವ ಒಳಚರಂಡಿ ವೆಟ್ವೆಲ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಕೆಯುಡಬ್ಲ್ಯುಎಸ್ಡಿಬಿ ಅಧಿಕಾರಿ ಗಂಗಾಧರಗೌಡಗೆ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸೂಚಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸ್ಲಂ ಬೋರ್ಡ್ ಇಲಾಖೆಯಿಂದ 5 ಮನೆಗಳ ಬೇಸ್ಮೆಂಟ್ ಕುಣಿಗಳು ತೆಗೆದು ಸುಮಾರು 6 ತಿಂಗಳಿಂದ ಕೆಲಸ ಮಾಡದೇ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ, ಸ್ಥಳಕ್ಕೆ ಹೋಗಿ ಸ್ಲಂ ಬೋರ್ಡ್ ಡೈರೆಕ್ಟರ್ ಕೃಷ್ಣಾರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡರು. ಮನೆಗಳನ್ನು ಶೀಘ್ರ ನಿರ್ಮಾಣ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟರು.