More

    ಹಳೇ ಹಾಸಿಗೆಯನ್ನು ಮಾರಲು ಹೋದ ಯುವತಿಯರಿಗೆ ಕಾದಿತ್ತು ಗಂಡಾಂತರ!

    ಬೆಂಗಳೂರು: ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಹೋದ ಯುವತಿಯರಿಬ್ಬರು ವಂಚಕರ ಜಾಲಕ್ಕೆ ಸಿಲುಕಿ ನಷ್ಟ ಅನುಭವಿಸಿದ್ದಾರೆ.

    ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್​ ಮತ್ತು ಸಪ್ನಾ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕನ್ಹಯ್ಯ ಕುಮಾರ್​ ಮತ್ತು ಉದಯ್​ಭಾನ್​ ಸಿಂಗ್​ ಎಂಬುವರ ವಿರುದ್ಧ ವೈಟ್​ಫೀಲ್ಡ್​ ವಿಭಾಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

    ತೇಜಸ್ವಿ ಸಿಂಗ್​ ಮತ್ತು ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್​ಎಕ್ಸ್​ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್​ಲೈನ್​ ಮೂಲಕ ಹಣ ಸಂದಾಯ ಮಾಡುತ್ತೇವೆ ಎಂದೇಳಿ ಮೊಬೈಲ್​ಗೆ ಕ್ಯೂಆರ್​ ಕೋಡ್​ ಕಳುಹಿಸಿದ್ದರು.

    ಅದನ್ನು ಸ್ಕ್ಯಾನ್​ ಮಾಡಿದ ತೇಜಸ್ವಿ ಸಿಂಗ್​ರ ಬ್ಯಾಂಕ್​ ಖಾತೆಯಿಂದ ಹಂತಹಂತವಾಗಿ 46,900 ರೂ. ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಇದೇ ರೀತಿ ಸಪ್ನಾರ ಬ್ಯಾಂಕ್​ ಖಾತೆಯಿಂದಲೂ 60 ಸಾವಿರ ರೂ. ಕಡಿತವಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಸೈಬರ್​ ವಂಚನೆ ಎಂಬುದು ಗೊತ್ತಾಗಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ಕನ ಮನೆಗೆ ಬಾರದ ಬಾವ, ಸಿಟ್ಟಿಗೆದ್ದ ಬಾಮೈದ ಮಹಿಳೆಯನ್ನು ಕೊಂದುಬಿಟ್ಟ!

    ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts