More

    ಬಸವ ಜಯಂತಿ ಪ್ರಯುಕ್ತ ಮೇ.5ರಿಂದ ಪ್ರವಚನ

    ಸಿಂಧನೂರು: ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಬಸವ ಜಯಂತಿ ಅಂಗವಾಗಿ ಮೇ.5 ರಿಂದ 10 ರವರೆಗೆ ಸಂಜೆ 6.30 ರಿಂದ 8.30 ರವರೆಗೆ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕೇಂದ್ರ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ತಿಳಿಸಿದರು.

    ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಕಳೆದ 25 ವರ್ಷಗಳಿಂದ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಬಸವ ಜಯಂತಿ ಉತ್ಸವದಲ್ಲಿ ಬಸವಾದಿ ಶರಣರ ದೇವರ ಕಲ್ಪನೆ, ಬಸವ ಧರ್ಮ-ವಿಶ್ವ ಧರ್ಮ, ಅನುಭವ ಮಂಟಪವು ಒಂದು ಲೋಕ ಕಲ್ಯಾಣ ಸಂಸ್ಥೆ, ಕಾಯಕ-ದಾಸೋಹಗಳ ಹಿರಿಮೆ, ಪಾಪ-ಪುಣ್ಯ, ನರಕ, ಮೇಲು-ಕೀಳು ಕುರಿತ ಶರಣರ ಚಿಂತನೆಗಳ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದರು.

    \ತಿಕೋಟ ವಿರಕ್ತಮಠದ ಚನ್ನಮಲ್ಲಿಕಾರ್ಜುನಸ್ವಾಮಿ ಪ್ರವಚನ ನೀಡಲಿದ್ದಾರೆ. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಕಲಾವಿದರಾದ ಬಸವರಾಜ ಮೋತಿ, ಪುಟ್ಟರಾಜ ಮೋತಿ, ನಾರಾಯಣಪ್ಪ ಮಾಡಸಿರವಾರ, ಅಮರೇಗೌಡ ಮಾ.ಪಾ. ಹಾಗೂ ಪಂಪನಗೌಡ ವಚನ ಸಂಗೀತ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
    ಬಸವ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸಲಿಂಗಪ್ಪ ಬಾದರ್ಲಿ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಹಂಪಣ್ಣ, ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಖಜಾಂಚಿ ಕೆ.ಶರಣಪ್ಪ ತೆಂಗಿನಕಾಯಿ, ಹಣಕಾಸು ಸಮಿತಿ ಸಂಚಾಲಕ ಶಾಂತಪ್ಪ ಚಿಂಚರಕಿ, ಶಿವಣ್ಣ, ಗುಂಡಪ್ಪ ಬಳಿಗಾರ, ನಿಜಗುಣ ಹಡಪದ, ಮಲ್ಲಿಕಾರ್ಜುನ ಹೊಗರನಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts