More

    ಬ್ಯಾಂಕ್‌ಗಳು ಆರ್ಥಿಕ ಸಮಾನತೆ ತರಲಿ

    ಕಾಗವಾಡ: ಬ್ಯಾಂಕ್‌ಗಳು ಉಳ್ಳವರಿಂದ ಠೇವಣಿ ಪಡೆದು ಹಣದ ಅವಶ್ಯಕತೆ ಇರುವವರಿಗೆ ಸಾಲ ವಿತರಿಸುವ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆ ತರಲು ಪ್ರಮುಖ ಪಾತ್ರ ವಹಿಸುತ್ತವೆ. ಆ ನಿಟ್ಟಿನಲ್ಲಿ ಸಾ.ರೆ. ಪಾಟೀಲ ಸಹಕಾರಿ ಬ್ಯಾಂಕ್ ಕೂಡ ಜನರ ಆರ್ಥಿಕ ಪ್ರಗತಿಗೆ ಪೂರಕವಾಗಿ ಬೆಳೆಯಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.

    ತಾಲೂಕಿನ ಶಿರಗುಪ್ಪಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಅಪ್ಪಾಸಾಹೇಬ ಉರ್ ಸಾ.ರೆ. ಪಾಟೀಲ ಜಯಸಿಂಗಪುರ-ಉದಗಾಂವ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ಮನುಷ್ಯನ ಭೌತಿಕ ಕಾರ್ಯಗಳಿಗೆ ಹಣದ ಅವಶ್ಯಕತೆಯಿದೆ. ಪ್ರಾಮಾಣಿಕತೆಯಿಂದ ಗಳಿಸಿದ ಹಣ ನೆಮ್ಮದಿ ನೀಡುತ್ತದೆ. ಬ್ಯಾಂಕ್‌ಗಳು ಸಮಾಜದಲ್ಲಿರುವ ಆರ್ಥಿಕ ಅಸಮತೋಲನ ಹೋಗಲಾಡಿಸಲು ಮತ್ತು ಸಮಾಜದ ಪ್ರತಿಯೊಂದು ವರ್ಗದ ಏಳಿಗೆಗಾಗಿ ಶ್ರಮಿಸಬೇಕು. ಅದರಂತೆ ಪಾಟೀಲ ಬ್ಯಾಂಕ್ ಕೂಡ ಉತ್ತಮ ಸೇವೆ ನೀಡಿ ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

    ಶಿರೋಳ ಶ್ರೀ ದತ್ತ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಡಿ ಜನಾರ್ದನ ಬೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಮಾಂಗಲೇಕರ ಬ್ಯಾಂಕ್ ಕುರಿತು ಮಾಹಿತಿ ನೀಡಿದರು.

    ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪ ಮಗೆಣ್ಣವರ, ಬ್ಯಾಂಕ್ ಅಧ್ಯಕ್ಷ ಮಹೇಂದ್ರ ಬಾಗೆ, ಉಪಾಧ್ಯಕ್ಷ ಅಪ್ಪಾಸೋ ನರೋಟೆ, ದತ್ತ ಕಾರ್ಖಾನೆ ಉಪಾಧ್ಯಕ್ಷ ಅರುಣ ದೇಸಾಯಿ, ಸಂಚಾಲಕ ಅಮರ ಯಾದವ, ಇಂದ್ರಜಿತ ಪಾಟೀಲ, ಸಿಬಿಕೆಎಸ್‌ಎಸ್‌ಕೆ ಸಂಚಾಲಕ ಅಣ್ಣಾಸಾಬ ಪಾಟೀಲ, ಮಹಾವೀರ ಕಾತ್ರಾಳೆ, ಭರ್ಮಣ್ಣ ಚೌಗುಲೆ, ಸುರೇಶ ಚೌಗುಲೆ, ಅಭಯ ಅಕಿವಾಟೆ, ಮೋಹನ ಲೋಕರೆ, ಅಶೋಕ ಕೋಳೆಕರ, ದರಗು ಗಾವಡೆ, ವಿನಾಯಕ ಕದಂ, ಮಿಲಿಂದ ಜಗದಾಳೆ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಗಣಪತಿ ಧನವಡೆ, ಅಶೋಕ ಬಾಮನೆ, ಎಂ.ಡಿ. ಕುಲಕರ್ಣಿ, ವಿಶ್ವನಾಥ ಮಾನೆ, ಶಿರೀಷ ಪಾಟೀಲ, ಕೆ.ಆರ್. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts