More

    ನೂತನ ವರ್ಷದ ಕ್ರಿಯಾಯೋಜನೆಗೆ ಮಂಜೂರಾತಿ: ಜನಜಾಗೃತಿ ವೇದಿಕೆ ಆರ್ಥಿಕ ವರ್ಷದ ಪ್ರಥಮ ಸಭೆ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ಬಲವರ್ಧನೆ, ನವಜೀವನ ಸಮಿತಿ ಸದಸ್ಯರಿಗೆ ಉದ್ಯೋಗ ಕೌಶಲ ತರಬೇತಿ, ಕಿರುಚಿತ್ರ ಪ್ರದರ್ಶನದ ಮೂಲಕ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಕಾರ್ಯಾಚರಣೆ ವ್ಯಾಪ್ತಿಯೊಳಗಡೆ ಭಜನಾ ಪರಿಷತ್‌ಗಳ ಸಂಯೋಜನೆ ಮೊದಲಾದ ಮಹತ್ವದ ಕ್ರಿಯಾಯೋಜನೆಗೆ ತಾಲೂಕು ಜನಜಾಗೃತಿ ವೇದಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

    ಎಸ್‌ಡಿಎಂ ಪಿನಾಕಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಜಾಗೃತಿ ವೇದಿಕೆಯ ಆರ್ಥಿಕ ವರ್ಷದ ಪ್ರಥಮ ಸಭೆಯಲ್ಲಿ ನೂತನ ವರ್ಷದ ಕ್ರಿಯಾಯೋಜನೆಗೆ ಮಂಜೂರಾತಿ ನೀಡಲಾಯಿತು.

    ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಅಧ್ಯಕ್ಷತೆ ವಹಿಸಿದ್ದರು. ನವಜೀವನ ಸಮಿತಿ ಸದಸ್ಯರಿಗೆ ರುಡ್‌ಸೆಟ್ ಸಹಕಾರದೊಂದಿಗೆ ಉದ್ಯೋಗ ಕೌಶಲ ತರಬೇತಿ ಹಾಗೂ ಪ್ರಮಾಣಪತ್ರ, ಆರ್ಥಿಕ ಸಹಕಾರ, ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಯೋಜನೆ, ಜೂನ್ ತಿಂಗಳಲ್ಲಿ ಗಿಡನಾಟಿ ಕಾರ್ಯಕ್ರಮ, ನವಜೀವನ ಸಮಿತಿ ಸದಸ್ಯರ ಯಶೋಗಾಥೆ ಸಂಗ್ರಹ, ಪಾನಮುಕ್ತರ ಆನ್‌ಲೈನ್ ಸಭೆ (ಗೂಗಲ್ ಮೀಟ್) ಮೂಲಕ ಸಂಜೆ 7ರಿಂದ 8 ಗಂಟೆಯೊಳಗಡೆ ಅಭಿಪ್ರಾಯ ಹಂಚಿಕೆ ವೇದಿಕೆ, ಅದಕ್ಕೆ 20 ಸದಸ್ಯರನ್ನು ಸೇರ್ಪಡೆಗೊಳಿಸುವಿಕೆ, ಜನಜಾಗೃತಿ ವೇದಿಕೆಯ ಚಟುವಟಿಕೆಗೆ ಪೂರಕವಾಗಿ ಭಜನಾ ಪರಿಷತ್‌ಗಳನ್ನು ವಲಯವಾರು ರಚಿಸಿಕೊಳ್ಳುವುದು, ಪಾನಮುಕ್ತ ಗ್ರಾಮಗಳ ನಿರ್ಮಾಣದ ಕಡೆಗೆ ಆದ್ಯತೆ ನೀಡುವುದು ಇವೇ ಮೊದಲಾದ ವಿಚಾರಗಳ ಬಗ್ಗೆ ವಿಮರ್ಶೆ ನಡೆದು ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.

    ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಮಾಜಿ ಅಧ್ಯಕ್ಷ ಅಡೂರು ವೆಂಕಟ್ರಾಯ ಮತ್ತು ಕಿಶೋರ್ ಹೆಗ್ಡೆ ಸಲಹೆ ನೀಡಿದರು.
    ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಕಾರ್ಯಕ್ರಮ ಅನುಷ್ಠಾನದಲ್ಲಿ ಲಭ್ಯವಿರುವ ಅನುದಾನ, ಮೌಲ್ಯಾಂಕನ ಮಾಡಿ ಬಹುಮಾನ ನೀಡುವ ವಿಚಾರ ಪ್ರಕಟಿಸಿದರು.

    ಜನಜಾಗೃತಿ ವೇದಿಕೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಗಣೇಶ್ ಕ್ರಿಯಾಯೋಜನೆ ಮಂಡಿಸಿ ವಿವರಣೆ ನೀಡಿದರು. ವಲಯವಾರು ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ಮತ್ತು ಬೆಳ್ತಂಗಡಿ ವಿಭಾಗದ ಯೋಜನಾಧಿಕಾರಿ ಸುರೇಂದ್ರ ಅನುಪಾಲನೆ ಮತ್ತು ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಶೌರ್ಯ ವಿಪತ್ತು ನಿರ್ವಹಣೆ ವಿಭಾಗದ ಯೋಜನಾಧಿಕಾರಿ ಜಯವಂತ ಪಟಗಾರ ವಿಪತ್ತು ಸಾಧನಾ ವರದಿ ಮಂಡಿಸಿದರು.

    ಪೂರ್ವಾಧ್ಯಕ್ಷರಾದ ಡಿ.ಎ.ರಹಿಮಾನ್, ಬೆಳಾಲು ತಿಮ್ಮಪ್ಪ ಗೌಡ, ಶೌರ್ಯ ವಿಪತ್ತು ವಿಭಾಗದ ಅಧಿಕಾರಿ ಕಿಶೋರ್ ಕಡಬ ಉಪಸ್ಥಿತರಿದ್ದರು. ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ವಂದಿಸಿದರು.

    ಪ್ರಮುಖ ವಿಚಾರಗಳ ಸಮಾಲೋಚನೆ

    ಅಕ್ಟೋಬರ್‌ನಲ್ಲಿ ಉಜಿರೆ ವಲಯ ವ್ಯಾಪ್ತಿಯಲ್ಲಿ ಬೃಹತ್ ಮದ್ಯವರ್ಜನ ಶಿಬಿರ ಆಯೋಜನೆ, ವಲಯಕ್ಕೆ ಕನಿಷ್ಠ ಎರಡರಂತೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಆಯೋಜನೆ, ಹೊಸ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಮತ್ತು ಅವರಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ಕಾರ್ಯಾಗಾರ, ವಿಶ್ವ ತಂಬಾಕು ವಿರೋಧಿ ದಿನ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಯೋಜನೆ, ತಾಲೂಕು ಕೇಂದ್ರದಲ್ಲಿ ಗಾಂ ಜಯಂತಿ ಕಾರ್ಯಕ್ರಮ ಆಯೋಜನೆ, ನವಜೀವನ ಸಮಿತಿ ಸದಸ್ಯರ ಸಂಪರ್ಕ ಅಭಿಯಾನ ಮನೆ ಭೇಟಿ, ನೂತನ ಸಮಿತಿ ರಚನೆ ಸಹಿತ ವಿವಿಧ ಪ್ರಮುಖ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts