More

    ಲಕ್ಷ್ಮೀ ನರಸಿಂಹ ದೇವರಿಗೆ ಪ್ರಾಣ ಪ್ರತಿಷ್ಠಾಪನೆ

    ಅರಸೀಕೆರೆ : ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪಂಚಮುಖಿ ಆಂಜನೇಯ, ವಿಷ್ಣು ಪಂಚಾಯತನ ಸಾನಿಧ್ಯದ ಶ್ರೀ ಲಕ್ಷ್ಮೀ ನರಸಿಂಹ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಕಳಸ ಸ್ಥಾಪನಾ ಕಾರ್ಯ ಶನಿವಾರ ವಿಧಿವತ್ತಾಗಿ ನೆರವೇರಿತು. ಕ್ಷೇತ್ರದ ವೇದಬ್ರಹ್ಮ ಸತೀಶ್ ಶರ್ಮ ನೇತೃತ್ವದಲ್ಲಿ ದತ್ತಾತ್ರೇಯ ಹೋಮ, ಧ್ವಜಾರೋಹಣ, ನವಗ್ರಹ ಹೋಮ ನಡೆಸಿ ಪೂರ್ಣಾಹುತಿ ಸಮರ್ಪಿಸಲಾಯಿತು. ಶ್ರೀ ಗಣಪತಿ, ಅಂಬಿಕೆ ಮತ್ತು ಸೂರ್ಯದೇವರ ಪ್ರಾಣ ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿಷೇಕ ಮತ್ತಿತರ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಕ್ಷೇತ್ರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸ ಸ್ಥಾಪನೆ ನೆರವೇರಿತು. ವಿವಿಧ ಕ್ಷೇತ್ರದ ಗಣ್ಯರು, ನಾಗರಿಕರು ಧಾರ್ಮಿಕ ಸೇವೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts