More

    ಹುಚ್ಚಾಟ ಮೆರೆದ ಪತ್ರಕರ್ತ, ಪೊಲೀಸ್..!

    ಬಾಗಲಕೋಟೆ: ಕರೊನಾ ಸೋಂಕಿನಿಂದ ಬಿಡುಗಡೆಯಾದ ಪತ್ರಕರ್ತ ಹಾಗೂ ಪೊಲೀಸ್‌ರೊಬ್ಬರನ್ನು ಅವರ ಅಭಿಮಾನಿಗಳು ಜವಾಬ್ದಾರಿ, ಸಾಮಾಜಿಕ ಅಂತರ ಮರೆತು ಅದ್ದೂರಿಯಲ್ಲಿ ಸ್ವಾಗತಿಸಿದರಲ್ಲದೇ, ಪಟಾಕಿ ಸಿಡಿಸಿ ಹೂವಿನ ಮಳೆಗರೆದ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಸೋಂಕಿತರು ಐದನೇ ದಿನಕ್ಕೆ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಅವರು ನಂತರ ಹೋಂ ಕ್ವಾರಂಟೈನ್ ಆಗಬೇಕಿತ್ತು. ಆದರೆ ಊರಿನಲ್ಲಿ ಅವರ ಅಭಿಮಾನಿಗಳು ಗುಂಪುಗೂಡಿ ಸ್ವಾಗತಿಸಿದ್ದಲ್ಲದೇ, ಪರಸ್ಪರ ಅಪ್ಪಿಕೊಂಡು, ಪಟಾಕಿ ಹೊಡೆದು, ಸಿಹಿ ತಿನ್ನಿಸಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts