ಮದ್ದೂರು: ತಾಲೂಕಿನ ಚಾಪುರದೊಡ್ಡಿ ಗ್ರಾಮದ ಮೂರನೇ ಮೈಲಿಯಲ್ಲಿ ರೂಪಿತವಾಗಿರುವ ಶ್ರೀ ಆದಿಪರಾಶಕ್ತಿ ಅಮ್ಮನವರ(ಬನ್ನಿ ಮರದಮ್ಮ) 93ನೇ ವರ್ಷದ ಜಾತ್ರೆ ಮಹೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಬುಧವಾರ ಬೆಳಗಿನ ಜಾವ 4 ಗಂಟೆಯಿಂದ 7 ಗಂಟೆವರೆಗೆ ಗಿಂಡಿ ಉತ್ಸವ ಜತೆ ಗ್ರಾಮದೇವತೆಗಳ ಪೂಜಾ ಮೆರವಣಿಗೆ ಹಾಗೂ ಬಾಯಿಬೀಗ ನಡೆಯಿತು. ತಂಬಿಟ್ಟಿನ ಆರತಿ ಬೆಳಗಲಾಯಿತು.
ಮಂಗಳವಾರ ಶ್ರೀ ಆದಿ ಪರಾಶಕ್ತಿ ಅಮ್ಮನವರ ಪೂಜಾ ಕುಣಿತ ಮತ್ತು ಪೂಜಾ ಮೆರವಣಿಗೆ ನಡೆಯಿತು. ಬುಧವಾರ ಬೆಳಗ್ಗೆ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.