ನವದೆಹಲಿ: ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಗಲ್ಲು ಘೋಷಿಸಿರುವ ಕೋರ್ಟ್ನ ತೀರ್ಪು ಬಗ್ಗೆ ಸಂತಸವಾಗಿದೆ ಎಂದು ಸಂತ್ರಸ್ಥೆ ತಂದೆ ಬದ್ರಿನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯದ ಈ ತೀರ್ಪಿನಿಂದಾಗಿ ಅಂತಹ ಅಪರಾಧಗಳನ್ನು ಮಾಡುವ ಜನರಲ್ಲಿ ಭಯವನ್ನು ಉಂಟುಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ವರು ಅಪರಾಧಿಗಳಿಗೂ ಡೆತ್ ವಾರಂಟ್ ಜಾರಿ ಮಾಡಿದ ದೆಹಲಿ ಪಟಿಯಾಲಾ ನ್ಯಾಯಾಲಯ, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ನೀಡಲು ಆದೇಶ ಹೊರಡಿಸಿದೆ.
ಡಿ.18ರಂದು ಅಪರಾಧಿಗಳಾದ ಪವನ್, ವಿನಯ್, ಅಕ್ಷಯ್ ಹಾಗೂ ಮುಖೇಶ್ಗೆ ಗಲ್ಲು ಶಿಕ್ಷೆ ಕಾಯಂ ಎಂದು ತೀರ್ಪು ನೀಡಿತ್ತು. ನಿರ್ಭಯಾ ಪಾಲಕರು, ಕೂಡಲೇ ಡೆತ್ ವಾರಂಟ್ ಜಾರಿ ಮಾಡುವಂತೆ ದೆಹಲಿ ಪಟಿಯಾಲಾ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು. (ಏಜೆನ್ಸೀಸ್)