More

    ನಿರ್ಭಯಾ ಪ್ರಕರಣ; ತೀರ್ಪಿನಿಂದ ಅಪರಾಧ ಎಸಗುವವರಲ್ಲಿ ಭಯ ಮೂಡಲಿದೆ ಎಂದ ಸಂತ್ರಸ್ಥೆ ತಂದೆ  

    ನವದೆಹಲಿ: ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಗಲ್ಲು ಘೋಷಿಸಿರುವ ಕೋರ್ಟ್​ನ ತೀರ್ಪು ಬಗ್ಗೆ ಸಂತಸವಾಗಿದೆ ಎಂದು ಸಂತ್ರಸ್ಥೆ ತಂದೆ ಬದ್ರಿನಾಥ್​ ಸಿಂಗ್​ ಪ್ರತಿಕ್ರಿಯಿಸಿದ್ದಾರೆ.

    ನ್ಯಾಯಾಲಯದ ಈ ತೀರ್ಪಿನಿಂದಾಗಿ ಅಂತಹ ಅಪರಾಧಗಳನ್ನು ಮಾಡುವ ಜನರಲ್ಲಿ ಭಯವನ್ನು ಉಂಟುಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಾಲ್ವರು ಅಪರಾಧಿಗಳಿಗೂ ಡೆತ್​ ವಾರಂಟ್​ ಜಾರಿ ಮಾಡಿದ ದೆಹಲಿ ಪಟಿಯಾಲಾ ನ್ಯಾಯಾಲಯ, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ನೀಡಲು ಆದೇಶ ಹೊರಡಿಸಿದೆ.

    ಡಿ.18ರಂದು ಅಪರಾಧಿಗಳಾದ ಪವನ್​, ವಿನಯ್​, ಅಕ್ಷಯ್​ ಹಾಗೂ ಮುಖೇಶ್​ಗೆ ಗಲ್ಲು ಶಿಕ್ಷೆ ಕಾಯಂ ಎಂದು ತೀರ್ಪು ನೀಡಿತ್ತು. ನಿರ್ಭಯಾ ಪಾಲಕರು, ಕೂಡಲೇ ಡೆತ್ ವಾರಂಟ್​ ಜಾರಿ ಮಾಡುವಂತೆ ದೆಹಲಿ ಪಟಿಯಾಲಾ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts