ಬಾಲಿವುಡ್ನಲ್ಲಿ ಪೌರಾಣಿಕ ಕಥಾಹಂದರವುಳ್ಳ ‘ಮಹಾಭಾರತ’ ಸಿನಿಮಾ ಮೂಡಿಬರಲಿದೆ ಎಂದು ಕಳೆದ ಕೆಲಸ ವರ್ಷಗಳಿಂದ ಸುದ್ದು ಹರಿದಾಡುತ್ತಲೇ ಇತ್ತು. ಆದರೆ, ಈ ವರೆಗೂ ಆ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ, ಆಗೊಮ್ಮೆ ಈಗೊಮ್ಮೆ ಮಹಾಭಾರತ ಸದ್ದು ಮಾಡುತ್ತಿರುತ್ತದೆ. ಆಮೀರ್ ಖಾನ್ ಸೇರಿ ಬಾಲಿವುಡ್ನ ಘಟಾನುಘಟಿಗಳು ಈ ಮಹಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗಿತ್ತು. ಆ ಪೈಕಿ ಆಮೀರ್ ಖಾನ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ ಎಂದೇ ಹೇಳಲಾಗಿತ್ತು. ಇದೀಗ ಇದೇ ಸಿನಿಮಾ ಬಗ್ಗೆ ಒಂದಷ್ಟು ಹೊಸ ವಿಚಾರಗಳು ಹೊರಬಿದ್ದಿವೆ.
ಇದನ್ನೂ ಓದಿ: VIDEO| ಅಗಲಿದ ಚಿರುವನ್ನು ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್ ಸರ್ಜಾ
ಬಾಹುಬಲಿ ಸಿನಿಮಾಕ್ಕೆ ಕಥೆ ಬರೆದಿದ್ದ ಎಸ್ಎಸ್ ರಾಜಮೌಳಿ ತಂದೆ ಕೆ. ವಿಜಯೇಂದ್ರ ಪ್ರಸಾದ್, ಮಹಾಭಾರತ ಚಿತ್ರಕ್ಕೂ ಕಥೆ ಬರೆಯಲಿದ್ದಾರೆ. ಬಳಿಕ ಅದು ಸಿನಿಮಾ ರೂಪ ಪಡೆದುಕೊಳ್ಳಲಿದೆ ಎನ್ನಲಾಗಿತ್ತು. ಇದೀಗ ಆ ಬಗ್ಗೆ ಸ್ವತಃ ವಿಜಯೇಂದ್ರ ಪ್ರಸಾದ್ ಮಾತನಾಡಿದ್ದಾರೆ. ‘ಮಹಾಭಾರತ ಸಿನಿಮಾ ಸಂಬಂಧಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಸಂವಹನಕ್ಕೆ ಭಾಷೆ ಅಡ್ಡಿಯಾಗುತ್ತಿದೆ. ಎಲ್ಲವನ್ನೂ ಫೋನ್ನಲ್ಲೇ ಚರ್ಚೆ ಮಾಡಲು ಸಾಧ್ಯವಿಲ್ಲ. ಆಮೀರ್ ಜತೆ ಕೈ ಜೋಡಿಸಲು ಆಗುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಾವಿಗೆ ಕರಣ್, ಆಲಿಯಾ ದೂಷಿಸುವುದು ಮೂರ್ಖತನ
ಇದೆಲ್ಲವನ್ನು ಬದಿಗಿಟ್ಟರೆ, ರಾಜಮೌಳಿ ಸಹ ಮಹಾಭಾರತ ಕಥೆಯನ್ನು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಬಾಹುಬಲಿ ಸಿನಿಮಾ ಬಳಿಕ ಹರಿದಾಡಿತ್ತು. ಪುತ್ರನ ಸಿನಿಮಾಕ್ಕೆ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆಯಲಿದ್ದಾರೆ. ಆ ಒಂದು ಕಾರಣಕ್ಕೆ ಆಮೀರ್ ಜತೆ ಕೈ ಜೋಡಿಸಲು ಹಿಂದೇಟು ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. (ಏಜೆನ್ಸೀಸ್)
ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು