ಫೆಬ್ರವರಿ ಐದರಿಂದ ಮೇ 14ರವರೆಗೂ ಪ್ರತಿ 15 ದಿನಗಳ ಗ್ಯಾಪ್ನಲ್ಲಿ ಕನ್ನಡದ ಹಲವು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಮೇ 14ರಂದು ಶಿವರಾಜಕುಮಾರ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರವು ಬಿಡುಗಡೆಯಾಗಲಿಕ್ಕಿದೆ. ಆ ನಂತರ ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅಭಿನಯದ ‘ಗರುಡ ಗಮನ ರಿಷಭ ವಾಹನ’ ಚಿತ್ರವು ಜೂನ್ 04ರಂದು ಬಿಡುಗಡೆಯಾಗಲಿದೆ. ಈ ಗ್ಯಾಪ್ನಲ್ಲಿ ಯಾವುದೇ ಚಿತ್ರವಿಲ್ಲವಲ್ಲ ಎನ್ನುತ್ತಿದ್ದವರಿಗೆ ಇದೀಗ ಮೇ 28ಕ್ಕೆ ಇನ್ನೊಂದು ನಿರೀಕ್ಷೆಯ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಶರಣ್ ಅಭಿನಯದ ‘ಅವತಾರ್ ಪುರುಷ – ಅಷ್ಟಮಂಡಲಕ ದಿಗ್ಬಂಧನ’ ಚಿತ್ರವನ್ನು ಮೇ 28ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ‘ಅವತಾರ್ ಪುರುಷ’ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಈ ಪೈಕಿ ಮೊದಲನೇ ಭಾಗವನ್ನು ಮೇ 28ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆದಿದ್ದು, ಅದಾಗಿ ಎರಡ್ಮೂರು ತಿಂಗಳ ನಂತರ ಇನ್ನೊಂದು ಭಾಗದ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶರಣ್ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಮಿಕ್ಕಂತೆ ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಸುಧಾರಾಣಿ, ಭವ್ಯ ಮುಂತಾದವರು ನಟಿಸಿದ್ದಾರೆ.
ದಾನಿಶ್ ಆರ್ಟ್ಸು ಸಂಯುಕ್ತಾ ಸೈನ್ಸು; ಪುನೀತ್ ನಿರ್ಮಾಣದ ಚಿತ್ರ ಪ್ರಾರಂಭ
ಮೋಸ ಮಾಡಿದ್ರಾ ನಟಿ ಸನ್ನಿ ಲಿಯೋನ್?; ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ..