ನವದೆಹಲಿ: ಸ್ವಯಂಘೋಷಿತ ದೇವಮಾನವ ಮತ್ತು ಅತ್ಯಾಚಾರ ಆರೋಪ ಹೊತ್ತು ಪರಾರಿಯಾಗಿರುವ ನಿತ್ಯಾನಂದ ಅಯೋಧ್ಯೆಯಲ್ಲಿ ಸೋಮವಾರ(ಜ.22) ರಂದು ನಡೆಯುವ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಮಂದಿರದ ಅದ್ಧೂರಿ ಉದ್ಘಾಟನೆ ಕಾರ್ಯಕ್ರಮಕ್ಕೆ ತನಗೆ ಆಹ್ವಾನ ಬಂದಿದೆ ಎಂದು ಹೇಳಿಕೊಂಡಿದ್ದು, ತಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ಏರ್ಲಿಫ್ಟ್ಗೆ ಎಚ್ಎಎಲ್ ವಿಮಾನ ನಿರಾಕರಿಸಿದ ಮುಯಿಝು: ಮಾಲ್ಡೀವ್ಸ್ನಲ್ಲಿ ಹಾರಿಹೋಯ್ತು ಬಾಲಕನ ಪ್ರಾಣ ಪಕ್ಷಿ!
ಕೈಲಾಸ ಎಂದು ಕರೆಯಲ್ಪಡುವ ತನ್ನ ದೇಶದಲ್ಲಿ “ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ” ಎಂದು ಕರೆಯಲ್ಪಡುವ ನಿತ್ಯಾನಂದ X ನಲ್ಲಿ ಹೀಗೆ ಬರೆದಿದ್ದಾರೆ, “ಈ ಐತಿಹಾಸಿಕ ಮತ್ತು ಅಸಾಧಾರಣ ಕಣ್ತುಂಬಿಕೊಳ್ಳಬೇಕಿದೆ. ಇದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಭಗವಾನ್ ರಾಮನನ್ನು ದೇವಾಲಯದ ಮುಖ್ಯ ದೇವತೆಯಲ್ಲಿ ಔಪಚಾರಿಕವಾಗಿ ಆಹ್ವಾನಿಸಲಾಗುತ್ತದೆ. ಸಾಂಪ್ರದಾಯಿಕ ಪ್ರಾಣ ಪ್ರತಿಷ್ಠೆಯು ದೇವತೆಗಳು ಇಡೀ ಜಗತ್ತನ್ನು ಅಲಂಕರಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾನೆ.
2 More Days Until the Inauguration of Ayodhya Ram Mandir!
Don't miss this historic and extraordinary event! Lord Rama will be formally invoked in the temple's main deity during the traditional Prana Pratishtha and will be landing to grace the entire world!
Having been formally… pic.twitter.com/m4ZhdcgLcm
— KAILASA's SPH NITHYANANDA (@SriNithyananda) January 20, 2024
ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ ಭಗವಾನ್ ಶ್ರೀ ನಿತ್ಯಾನಂದ ಪರಮಶಿವಂ ಈ ಭವ್ಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಪೋಸ್ಟ್ ಸೇರಿಸಲಾಗಿದೆ.
ನಿತ್ಯಾನಂದನ ಚಾಲಕ ನೀಡಿದ ದೂರಿನ ಆಧಾರದ ಮೇಲೆ 2010 ರಲ್ಲಿ ದಾಖಲಿಸಲಾದ ಅತ್ಯಾಚಾರ ಪ್ರಕರಣವು ಆತನ ಬಂಧನಕ್ಕೆ ಕಾರಣವಾಯಿತು. ಆದರೆ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ, 2020 ರಲ್ಲಿ ಸ್ವಯಂ-ಘೋಷಿತ ದೇವಮಾನವ ದೇಶದಿಂದ ಪಲಾಯನ ಮಾಡಿದ್ದಾನೆ.
ಇಡೀ ವಿಶ್ವವೇ ಎದುರು ನೋಡುತ್ತಿರುವ ರಾಮ ಮಂದಿರದ ಮಹಾಮಸ್ತಕಾಭಿಷೇಕ ಜ.22(ಸೋಮವಾರ)ನಡೆಯಲಿದ್ದು, ಜ.23 ರಂದು ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು.
ಒಂದೇ ದೇಗುಲದಲ್ಲಿ 2 ವಿಗ್ರಹಗಳೇಕೆ?: ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಪ್ರಶ್ನೆ