More

    ಇ-ಸ್ವತ್ತು ಸಿಗದೆ ಆತ್ಮಹತ್ಯೆಗೆ ಯತ್ನ

    ಶಿಕಾರಿಪುರ: ಇ-ಸೊತ್ತು ಪಡೆಯಲು ಪುರಸಭೆಗೆ ಅಲೆದೂ, ಅಲೆದು ಸುಸ್ತಾಗಿ ಹೆಂಡತಿ, ಮಗುವಿನೊಂದಿಗೆ ವ್ಯಕ್ತಿಯೊಬ್ಬ ಪುರಸಭೆಯ ಮುಂಭಾಗ ಶನಿವಾರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದನು. ಪಟ್ಟಣದ ಮುನಿರತ್ನ ಎಂಬಾತ ಜಯಣ್ಣ ಲೇಔಟ್‌ನಲ್ಲಿ ನಿವೇಶನವನ್ನು ಖರೀದಿಸಿದ್ದು ಸದರಿ ನಿವೇಶನವನ್ನು ಎರಡು ಭಾಗಗಳಾಗಿ ವಿಂಗಡಿಸಿದ ಕಾರಣ ಇ-ಸೊತ್ತು ನೀಡಲು ಹಲವು ವರ್ಷಗಳಿಂದ ಪುರಸಭೆಗೆ ಅಲೆಯುತ್ತಿದ್ದರು. ಆದರೂ ಇ- ಸ್ವತ್ತು ದೊರಕದ ಕಾರಣ ತಾಳ್ಮೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಮುಂದಾದರು. ಆಗ ಸ್ಥಳೀಯರು ಮತ್ತು ಸಿಬ್ಬಂದಿ ತಡೆದರು. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಭರತ್ ಪ್ರತಿಕ್ರಿಯಿಸಿ, ಇನ್ನು 15 ದಿನಗಳ ಒಳಗಾಗಿ ನಗರ ಗ್ರಾಮೀಣ ಯೋಜನಾ ಪ್ರಾಧಿಕಾರದೊಂದಿಗೆ ಪತ್ರ ವ್ಯವಹರಿಸಿ ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts