ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ದರ ಹೆಚ್ಚಿದೆ.
ಜೂನ್ಗಿಂತಲೂ ಮೊದಲು ತುಂಬ ಕಡಿಮೆ ಇದ್ದ ಚೇತರಿಕೆಯ ಪ್ರಮಾಣ ಜೂ.20ರಂದು ಶೇ.50ರಷ್ಟಾಗಿತ್ತು. ಇದೀಗ ಶೇ.66.03ಕ್ಕೆ ಏರಿದೆ. ಇಡೀ ದೇಶದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.58.67ರಷ್ಟಿದ್ದು, ದೆಹಲಿಯ ರಿಕವರಿ ರೇಟ್ ಅಧಿಕವಾದಂತಾಗಿದೆ.
ದೆಹಲಿಯಲ್ಲಿ ಪ್ರತಿದಿನ 3000ದ ಆಸುಪಾಸಿನಲ್ಲಿ ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗುತ್ತಿವೆ. ಜೂ.23ರಂದು ಬರೋಬ್ಬರಿ 3947 ಜನಲ್ಲಿ ಸೋಂಕು ದೃಢಪಟ್ಟಿತ್ತು. ಆ ಸಮಯದಲ್ಲಿ ಅಲ್ಲಿನ ಚೇತರಿಕೆ ಪ್ರಮಾಣ ಶೇ.59.02ರಷ್ಟಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕರೊನಾ ವಿರುದ್ಧ ಹೋರಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ತಪಾಸಣೆ, ಚಿಕಿತ್ಸೆಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಮನೆಮನೆಗೆ ಹೋಗಿ ಟೆಸ್ಟ್ ಮಾಡುವುದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತಗತಿಯಲ್ಲಿ ಟ್ರೇಸ್ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್)
ಪೊಲೀಸ್ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?