More

    ಕಣ್ಣುಗಳೇ ಕಳೆದು ಹೋದಾಗ… ; ಅಶ್ವಿನಿ ಪುನೀತ್‌ರಿಂದ ‘ಕೆರೆಬೇಟೆ’ ಚಿತ್ರದ ಮೂರನೇ ಹಾಡು ರಿಲೀಸ್

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ರಾಜಹಂಸ’ ಖ್ಯಾತಿಯ ಗೌರಿಶಂಕರ್ ಮತ್ತು ಬಿಂದು ಶಿವರಾಮ್ ನಟಿಸಿರುವ ರಾಜ್ ಗುರು ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಕೆರೆಬೇಟೆ’. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಎರಡು ಹಾಡುಗಳು ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ಅದರ ಬೆನ್ನಲ್ಲೇ ಇತ್ತೀಚೆಗಷ್ಟೆ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರದ ‘ಕಣ್ಣುಗಳೇ ಕಳೆದು ಹೋದಾಗ’ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

    ಕಣ್ಣುಗಳೇ ಕಳೆದು ಹೋದಾಗ… ; ಅಶ್ವಿನಿ ಪುನೀತ್‌ರಿಂದ ‘ಕೆರೆಬೇಟೆ’ ಚಿತ್ರದ ಮೂರನೇ ಹಾಡು ರಿಲೀಸ್

    ಇದೊಂದು ಪ್ಯಾಥೋ ಸಾಂಗ್ ಆಗಿದ್ದು ಪ್ರಮೋದ್ ಮರವಂತೆ ಸಾಹಿತ್ಯ, ಗಗನ್ ಬಡೇರಿಯಾ ಸಂಗೀತ ಮತ್ತು ಸಿದ್ಧಾರ್ಥ್ ಬೆಳ್ಮಣ್ಣು ಧ್ವನಿಯಲ್ಲಿ ಮೂಡಿಬಂದಿದೆ. ನಿರ್ದೇಶಕ ರಾಜ್‌ಗುರು, ‘ಅಪ್ಪು ಸರ್ ಜತೆ ‘ನಟಸಾರ್ವಭೌಮ’ ಮತ್ತು ‘ರಣವಿಕ್ರಮ’ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ನಮ್ಮ ಮಣ್ಣಿನ ವಿಷಯ ಪ್ರಧಾನ ಕಥೆಗಳನ್ನು ಮಾಡಬೇಕು ಅಂತ ಅಪ್ಪು ಸರ್ ಹೇಳುತ್ತಿದ್ದರು. ಈ ಚಿತ್ರದ ಶೂಟಿಂಗ್ 70 ದಿನ ನಡೆಸಿದ್ದೇವೆ’ ಎಂದು ಹೇಳಿಕೊಂಡರು. ನಾಯಕಿ ಬಿಂದು, ‘ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳಾದ ಕಾರಣ ನನಗೆ ಮಲೆನಾಡಿದ ಭಾಷೆ ಕಷ್ಟವಾಗಿತ್ತು. ಆದರೆ, ಇಡೀ ಸಿನಿಮಾ ತಂಡ ಮಲೆನಾಡಿದನವರಾದ ಕಾರಣ ಕ್ರಮೇಣ ಕಲಿತೆ. ತುಂಬ ಗಟ್ಟಿ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.

    ಕಣ್ಣುಗಳೇ ಕಳೆದು ಹೋದಾಗ… ; ಅಶ್ವಿನಿ ಪುನೀತ್‌ರಿಂದ ‘ಕೆರೆಬೇಟೆ’ ಚಿತ್ರದ ಮೂರನೇ ಹಾಡು ರಿಲೀಸ್

    ನಾಯಕ ಗೌರಿಶಂಕರ್, ‘ತುಂಬಾ ಸೋಲನ್ನು ಕಂಡಿದ್ದೇನೆ. ಹಾಗಂತ ಸೋತು ಸುಮ್ಮನೆ ಕೂರುವುದು ತುಂಬ ಕಷ್ಟ. ಸಿನಿಮಾ ಸಹವಾಸವೇ ಬೇಡ ಎನ್ನುತ್ತಿದ್ದೆ. ರಾಜ್ ಗುರು ಕಥೆ ಹೇಳಿದಾಗ ಇಷ್ಟವಾಯಿತು. ತುಂಬ ಸಿದ್ಧತೆ ಮಾಡಿಕೊಂಡಿದ್ದೇನೆ. ಈ ಚಿತ್ರದ ಮೂಲಕಕ ಗೆಲ್ಲುತ್ತೇನೆ ಎಂಬ ಭರವಸೆಯಿದೆ. ಗೆಲುವು ನನಗೆ ಅನಿವಾರ್ಯವೂ ಕೂಡ’ ಎಂದು ಹೇಳಿಕೊಂಡರು. ಅಪ್ಪಟ ಮಲೆನಾಡಿನ ಆಚರಣೆ, ಜೀವನದ ಕುರಿತ ‘ಕೆರೆಬೇಟೆ’ ಇದೇ ಶುಕ್ರವಾರ (ಮಾ. 15) ತೆರೆಗೆ ಬರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts