ಹಿಮಾಚಲ ಪ್ರದೇಶದ ಮಣಿಕರಣ್ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್ನೇರ್ ಗುರುಪ್ರಕಾಶ್‘ರ ಅಭಿಮಾನದ ಬೈಸಿಕಲ್ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಅಪ್ಪು ಸಮಾಧಿಗೆ ಭೇಟಿ ನೀಡಿದ ಗುರು ಅವರನ್ನು ಸ್ವಾಗತಿಸಿ ದೊಡ್ಮನೆ ಕುಟುಂಬದ ಶಿವಣ್ಣ, ರಾಘಣ್ಣ ಅವರು ಸನ್ಮಾನಿಸಿದ್ದರು. ಬಳಿಕ, ಗುರು ಪ್ರಕಾಶ್ ಗೌಡ ಅವರನ್ನು ತಮ್ಮ ಮನೆಯ ಬಳಿ ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಕೂಡ, ಅಪ್ಪು ಅವರ ಈ ಅಪರೂಪದ ಅಭಿಮಾನಿಯನ್ನು ಅಭಿನಂದಿಸಿದ್ದಾರೆ.
ಇದೀಗ, ‘ಮೌಂಟ್ನೇರ್ ಗುರುಪ್ರಕಾಶ್‘ ಅವರನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೂಡ ಭೇಟಿ ಮಾಡಿ ಅಭಿನಂದಿಸಿ, ಭಾವುಕರಾಗಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಅಪ್ಪು ಅಭಿಮಾನಿಯನ್ನು ಭೇಟಿಯಾದ ಅಶ್ವಿನಿ ಅವರ ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ತಮ್ಮ ಮನಸ್ಸಿನಲ್ಲಿ ಬಹಳಷ್ಟು ನೋವಿದ್ದರೂ ಸಹ ಅಶ್ವಿನಿ ಅವರು ಬಂದು ಸೈಕಲ್ ತುಳಿದ ಅಪ್ಪು ಅಭಿಮಾನಿ ಗುರು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಹೇಗಿತ್ತು ಅಪ್ಪು ಅಭಿಮಾನಿಯ 3,350 ಕಿಮೀ ಸೈಕಲ್ ಯಾತ್ರೆ? 5 ದಿನ ಸೈಕಲ್ ರಿಪೇರಿ! ವಿಜಯವಾಣಿ ಸ್ಪೆಷಲ್…
ಗಣರಾಜ್ಯೋತ್ಸವದಂದು ಶಕ್ತಿಧಾಮ ಮಕ್ಕಳ ಜೊತೆ ಸ್ಕೂಲ್ ಬಸ್ನಲ್ಲಿ ಜಾಲಿ ರೈಡ್! ಶಿವಣ್ಣ ವಿಡಿಯೋ ವೈರಲ್…
ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು! ‘ಜೇಮ್ಸ್’ ವಿಶೇಷ ಪೋಸ್ಟರ್ ವೈರಲ್…