More

    ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿ

    ರಾಯಚೂರು: ಇತ್ತೀಚೆಗೆ ನಿಧನರಾದ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿಯವರ ಪತ್ನಿ ಸುಮಾ ಗಸ್ತಿಗೆ ರಾಜ್ಯಸಭೆ ಸದಸ್ಯ ಸ್ಥಾನ ನೀಡಿ ಎಂದು ರಾಜ್ಯ ಸವಿತಾ ಸಮುದಾಯದ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ಇಟಗಿ ಒತ್ತಾಯಿಸಿದರು.

    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಿಂದುಳಿದ ಸವಿತಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಶೋಕ ಗಸ್ತಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು, ಅವರ ಅಕಾಲಿಕ ನಿಧನದಿಂದ ಸಂಕಷ್ಟದಲ್ಲಿರುವ ಅವರ ಪತ್ನಿಗೆ ಸ್ಥಾನಮಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದರು.

    ಮೂರು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಅಶೋಕ ಗಸ್ತಿಯವರ ಪಕ್ಷ ನಿಷ್ಠೆ ಗುರುತಿಸಿ ಬಿಜೆಪಿ ಅವರಿಗೆ ಉನ್ನತ ಸ್ಥಾನ ನೀಡಿತ್ತು. ಆದರೆ, ಕರೊನಾ ಮಹಾಮಾರಿಗೆ ತುತ್ತಾಗಿ ಅವರು ನಿಧನರಾಗಿ ಸಮಾಜ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ.

    ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪದವೀಧರರಾಗಿರುವ ಅವರ ಪತ್ನಿ ಸುಮಾ ಗಸ್ತಿಯನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ಮೂಲಕ ಅಶೋಕ ಗಸ್ತಿ ಸಾವಿಗೆ ನ್ಯಾಯ ಒದಗಿಸಲು ಬಿಜೆಪಿ ವರಿಷ್ಠರು ಮುಂದಾಗಬೇಕು ಎಂದು ರಾಘವೇಂದ್ರ ಇಟಗಿ ಒತ್ತಾಯಿಸಿದರು. ಸಮುದಾಯದ ಜಿಲ್ಲಾಧ್ಯಕ್ಷ ವಿಜಯಭಾಸ್ಕರ್ ಇಟಗಿ, ಪದಾಧಿಕಾರಿಗಳಾದ ವಿ.ಗೋವಿಂದ, ಇ.ಆಂಜಿನೇಯ, ಎಂ.ಬಸವರಾಜ, ಎ.ಎಸ್.ರಘು, ಜಿ.ಪ್ರದೀಪ್, ಎಸ್.ಅನಿಲಕುಮಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts