ಹುಬ್ಬಳ್ಳಿ: ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ವಿಆರ್ಎಲ್ ಮೀಡಿಯಾ ನಿರ್ಮಿಸುತ್ತಿರುವ ‘ವಿಜಯಾನಂದ’ ಚಿತ್ರ ತಂಡದ ಆಯ್ಕೆಯಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯಲ್ಲಿ ಕಲಾವಿದರ ದಂಡು ಜಮಾಯಿಸಿದೆ. ಮಕ್ಕಳು, ಮಹಿಳೆಯರು ಸೇರಿ ವಿವಿಧ ವಯೋಮಾನದ ಹಲವಾರು ಜನರು ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಯುತ್ತಿರುವ ಆಡಿಷನ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ವಿಜಯಾನಂದ ಚಿತ್ರವನ್ನು ರಿಶಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಅನಂತನಾಗ್ ಮತ್ತು ನಟ ನಿಹಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರವು 2022ಕ್ಕೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಇದೀಗ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಮಹಿಳಾ ಉದ್ಯೋಗಿಯನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದ ಮ್ಯಾನೇಜರ್ ಬಂಧನ
7 ರಿಂದ 70 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ VRL ಫಿಲ್ಮ್ ಪ್ರೊಡಕ್ಷನ್ಸ್, ಪ್ರತಿಯೊಬ್ಬ ಕಲಾವಿದರಿಂದ ಎರಡು ನಿಮಿಷ ಡೈಲಾಗ್ ಹೇಳಿಸಿ ಆಡಿಷನ್ ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಷೆ ಬಲ್ಲವರಿಗೆ ಆದ್ಯತೆ ನೀಡಲಾಗಿದ್ದು, ಇಂದು ಸಂಜೆ 6 ಗಂಟೆವರೆಗೆ ಆಡಿಷನ್ ಮುಂದುವರಿಯಲಿದೆ.
ಅನಂತ್ ನಾಗ್ ಹುಟ್ಟುಹಬ್ಬಕ್ಕೆ ವಿಜಯಾನಂದ ವಿಶೇಷ ಗಿಫ್ಟ್; ಚಿತ್ರತಂಡದಿಂದ ಟೀಸರ್ ಬಿಡುಗಡೆ
ಗಾಂಧಿ ಕನಸು ಸಾಕಾರಗೊಳಿಸಲು ಈ ಕೆಲಸ ಮಾಡಿ: ಸಿಎಂ ಸೇರಿ ಎಲ್ಲಾ ಸಚಿವ-ಶಾಸಕರಿಗೆ ಎಂಟಿಬಿ ನಾಗರಾಜು ಪತ್ರ