More

    ‘ವಿಜಯಾನಂದ’ ಚಿತ್ರದ ಆಡಿಷನ್ಸ್​ಗೆ ಜಮಾಯಿಸಿದ ಕಲಾವಿದರು

    ಹುಬ್ಬಳ್ಳಿ: ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ವಿಆರ್​ಎಲ್​ ಮೀಡಿಯಾ ನಿರ್ಮಿಸುತ್ತಿರುವ ‘ವಿಜಯಾನಂದ’ ಚಿತ್ರ ತಂಡದ ಆಯ್ಕೆಯಲ್ಲಿ ಭಾಗವಹಿಸಲು ಇಂದು ಹುಬ್ಬಳ್ಳಿಯಲ್ಲಿ ಕಲಾವಿದರ ದಂಡು ಜಮಾಯಿಸಿದೆ. ಮಕ್ಕಳು, ಮಹಿಳೆಯರು ಸೇರಿ ವಿವಿಧ ವಯೋಮಾನದ ಹಲವಾರು ಜನರು ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್​​ನಲ್ಲಿ ನಡೆಯುತ್ತಿರುವ ಆಡಿಷನ್ಸ್​​​​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ವಿಆರ್​ಎಲ್​ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​​ನಡಿ ನಿರ್ಮಾಣವಾಗುತ್ತಿರುವ ವಿಜಯಾನಂದ ಚಿತ್ರವನ್ನು ರಿಶಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಅನಂತನಾಗ್​ ಮತ್ತು ನಟ ನಿಹಾಲ್​ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಚಿತ್ರವು 2022ಕ್ಕೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಚಿತ್ರಕ್ಕೆ ಇದೀಗ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

    ಇದನ್ನೂ ಓದಿ: ಮಹಿಳಾ ಉದ್ಯೋಗಿಯನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದ ಮ್ಯಾನೇಜರ್​ ಬಂಧನ

    7 ರಿಂದ 70 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ VRL ಫಿಲ್ಮ್ ಪ್ರೊಡಕ್ಷನ್ಸ್, ಪ್ರತಿಯೊಬ್ಬ ಕಲಾವಿದರಿಂದ ಎರಡು ನಿಮಿಷ ಡೈಲಾಗ್ ಹೇಳಿಸಿ ಆಡಿಷನ್ ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಷೆ ಬಲ್ಲವರಿಗೆ ಆದ್ಯತೆ ನೀಡಲಾಗಿದ್ದು, ಇಂದು ಸಂಜೆ 6 ಗಂಟೆವರೆಗೆ ಆಡಿಷನ್ ಮುಂದುವರಿಯಲಿದೆ.

    ಅನಂತ್ ನಾಗ್ ಹುಟ್ಟುಹಬ್ಬಕ್ಕೆ ವಿಜಯಾನಂದ ವಿಶೇಷ ಗಿಫ್ಟ್; ಚಿತ್ರತಂಡದಿಂದ ಟೀಸರ್ ಬಿಡುಗಡೆ

    ಕುಡಿದ ಅಮಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಯುವಕ

    ಗಾಂಧಿ ಕನಸು ಸಾಕಾರಗೊಳಿಸಲು ಈ ಕೆಲಸ ಮಾಡಿ: ಸಿಎಂ ಸೇರಿ ಎಲ್ಲಾ ಸಚಿವ-ಶಾಸಕರಿಗೆ ಎಂಟಿಬಿ ನಾಗರಾಜು ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts