ಅಯೋಧ್ಯೆ: 500 ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಪುನರ್ ನಿರ್ಮಾಣವಾದ ಭಗವಾನ್ ಶ್ರೀರಾಮನ ಮಂದಿರ ಲೋಕಾರ್ಪಣೆಗೊಂಡಿದೆ. ಈ ಅಭೂತಪೂರ್ವ ಸನ್ನಿವೇಶಕ್ಕೆ ವಿಶ್ವದ 50 ದೇಶಗಳ 92 ಗಣ್ಯ ಅತಿಥಿಗಳು ಸಾಕ್ಷಿಯಾದರು.
ಇದನ್ನೂ ಓದಿ:ಹಾಸ್ಯನಟ ವಡಿವೇಲು ಬಗ್ಗೆ ಹೀಗೆಲ್ಲಾ ಹೇಳಿದ್ದಾನೆ ಮಗ ಸುಬ್ರಮಣಿ!
ಭಾರತದ ಉದ್ಯಮಿಗಳು, ಸಿನೆಮಾ ಹಾಗೂ ಕ್ರಿಕೆಟ್ ತಾರೆಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
PHOTO | Large number of devotees gather to enter the Ram temple, in Ayodhya. The doors of the Ram Temple opened today to the general public after Monday's Pran Pratishtha of the Ram Lalla idol.
(PTI Photo/Kamal Kishore) pic.twitter.com/FGxcd3ec7Z
— Press Trust of India (@PTI_News) January 23, 2024
ರಾಮಜನ್ಮಭೂಮಿ ಟ್ರಸ್ಟ್ ಮೊದಲೇ ಘೋಷಿಸಿದಂತೆ ಜನವರಿ 23ರಿಂದ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆಯಿಂದ ಆಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆಯಿಂದ ಇದುವರೆಗೆ ಭವ್ಯ ರಾಮ ಮಂದಿರಕ್ಕೆ ತೆರಳಿದ ರಾಮಲಲ್ಲಾ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಭಕ್ತರಿಗೆ ದರ್ಶನ ನೀಡಿದ ಹೆಗ್ಗಳಿಕೆಗೆ ಬಾಲರಾಮ ಪಾತ್ರರಾಗಿದ್ದಾನೆ.
ಪ್ರತಿ ದಿನ ರಾಮಮಂದಿರ ಬೆಳಗ್ಗೆ 7 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಬೆಳಗ್ಗೆ 7 ರಿಂದ 11.30ರ ವರೆಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಖಗಳು ನಡೆಯಲಿದೆ. ಬಳಿಕ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದೆ ಎಂದು ಟ್ರಸ್ಟ್ ಹೇಳಿದೆ.
ಒಂದು ತಿಂಗಳು ಮೊಬೈಲ್ ದೂರವಿಟ್ಟರೆ ಸಿಗಲಿದೆ ಭರ್ಜರಿ ಬಹುಮಾನ? ಆದರೆ ಷರತ್ತುಗಳು ಅನ್ವಯ!