More

    ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

    ಬೆಂಗಳೂರು: ಮಗನಂತಿದ್ದ ಅಳಿಯ ಚಿರಂಜೀವಿ ಸಾವಿನಿಂದ ನಟ ಅರ್ಜುನ್​ ಸರ್ಜಾ ತೀವ್ರ ದುಃಖಿತರಾಗಿದ್ದಾರೆ. ಎತ್ತಾಡಿಸಿದ ಹುಡುಗನ ಶವವನ್ನು ತಾನೇ ಹೊರುವ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಅವರದ್ದು.

    ಚಿರು ಸಾವಿನ ಬಳಿಕ ಅರ್ಜುನ್​ ಸರ್ಜಾ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಜೂ.7ರಂದು ಚಿರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ತಮ್ಮ ಫೇಸ್​ಬುಕ್​ನ ಪ್ರೊಫೈಲ್​ ಹಾಗೂ ಕವರ್​ ಫೋಟೋವನ್ನು ಅರ್ಜುನ್​ ಸರ್ಜಾ ಬದಲಿಸಿದ್ದರು. ಅಲ್ಲಿ ಕಪ್ಪು ಫೋಟೋವನ್ನು ಹಾಕಿ ಮೌನವಾಗಿಯೇ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದರು.
    ಚಿರಂಜೀವಿ ಅಂತ್ಯಕ್ರಿಯೆಯಲ್ಲಿ ಎಲ್ಲ ಕೆಲಸಗಳನ್ನೂ ಮುಂದಾಗಿ ಮಾಡಿದ್ದಾರೆ. ಕಣ್ಣಲ್ಲಿ ನೀರು ಹಾಕುತ್ತಲೇ ಅಳಿಯನ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ನೋವು ಸಹಿಸಿ, ಕಾರ್ಯಗಳನ್ನು ಮುಗಿಸಿದ ಅರ್ಜುನ್​ ಸರ್ಜಾ ಇದೀಗ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ‘ಅಪ್ಪ’ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು…

    ಚಿರಂಜೀವಿ ಅವರೊಂದಿಗೆ ಇರುವ ಫೋಟೋವೊಂದನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ ಅವರು, ಐ ಮಿಸ್​ ಯು ಮೈ ಬಾಯ್​…ಈ ವಿಧಿ ಎಂಬುದು ತುಂಬ ಕ್ರೂರಿ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಅದಾದ ಬಳಿಕ ತಮ್ಮ ಪ್ರೊಫೈಲ್​ ಫೋಟೋದಲ್ಲಿ ಕಪ್ಪು ಚಿತ್ರವನ್ನು ತೆಗೆದು ತಮ್ಮದೇ ಫೋಟೋ ಹಾಕಿದ್ದಾರೆ. ಆದರೆ ಆ ಫೋಟೋದಲ್ಲಿ ಅರ್ಜುನ್ ಸರ್ಜಾ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿದೆ. ಯಾರೊಂದಿಗೋ ಹೋರಾಡಲು ಸಿದ್ಧರಾದಂತೆ ಆ್ಯಕ್ಷನ್​ ಮಾಡಿಕೊಂಡಿದ್ದಾರೆ. ಮುಖ ಗಂಟಿಕ್ಕಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಮೃತದೇಹಕ್ಕೆ ಮಾಡಿದ ಕೊವಿಡ್​-19 ಟೆಸ್ಟ್​ನ ವರದಿ ಮೂರು ತಾಸಿನ ಬಳಿಕ ಹೊರಬಿತ್ತು…

    ಈ ಫೋಟೋವನ್ನು ಫೇಸ್​ಬುಕ್​ ಪ್ರೊಫೈಲ್​ ಮಾಡಿಕೊಳ್ಳುವ ಮೂಲಕ, ತನ್ನ ಅಳಿಯನ್ನು ಅಕಾಲಿಕವಾಗಿ ಕರೆದುಕೊಂಡು ಹೋದ ವಿಧಿಯ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕವರ್ ಫೋಟೋದಲ್ಲಿ ಇನ್ನೂ ಕಪ್ಪು ಚಿತ್ರವೇ ಉಳಿದುಕೊಂಡಿದೆ.

    ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು...

    ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts