ಬೆಂಗಳೂರು: ಮಗನಂತಿದ್ದ ಅಳಿಯ ಚಿರಂಜೀವಿ ಸಾವಿನಿಂದ ನಟ ಅರ್ಜುನ್ ಸರ್ಜಾ ತೀವ್ರ ದುಃಖಿತರಾಗಿದ್ದಾರೆ. ಎತ್ತಾಡಿಸಿದ ಹುಡುಗನ ಶವವನ್ನು ತಾನೇ ಹೊರುವ ಪರಿಸ್ಥಿತಿ ಬಂತಲ್ಲಾ ಎಂಬ ನೋವು ಅವರದ್ದು.
ಚಿರು ಸಾವಿನ ಬಳಿಕ ಅರ್ಜುನ್ ಸರ್ಜಾ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಜೂ.7ರಂದು ಚಿರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ತಮ್ಮ ಫೇಸ್ಬುಕ್ನ ಪ್ರೊಫೈಲ್ ಹಾಗೂ ಕವರ್ ಫೋಟೋವನ್ನು ಅರ್ಜುನ್ ಸರ್ಜಾ ಬದಲಿಸಿದ್ದರು. ಅಲ್ಲಿ ಕಪ್ಪು ಫೋಟೋವನ್ನು ಹಾಕಿ ಮೌನವಾಗಿಯೇ ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದರು.
ಚಿರಂಜೀವಿ ಅಂತ್ಯಕ್ರಿಯೆಯಲ್ಲಿ ಎಲ್ಲ ಕೆಲಸಗಳನ್ನೂ ಮುಂದಾಗಿ ಮಾಡಿದ್ದಾರೆ. ಕಣ್ಣಲ್ಲಿ ನೀರು ಹಾಕುತ್ತಲೇ ಅಳಿಯನ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ನೋವು ಸಹಿಸಿ, ಕಾರ್ಯಗಳನ್ನು ಮುಗಿಸಿದ ಅರ್ಜುನ್ ಸರ್ಜಾ ಇದೀಗ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ‘ಅಪ್ಪ’ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು…
ಚಿರಂಜೀವಿ ಅವರೊಂದಿಗೆ ಇರುವ ಫೋಟೋವೊಂದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಅವರು, ಐ ಮಿಸ್ ಯು ಮೈ ಬಾಯ್…ಈ ವಿಧಿ ಎಂಬುದು ತುಂಬ ಕ್ರೂರಿ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅದಾದ ಬಳಿಕ ತಮ್ಮ ಪ್ರೊಫೈಲ್ ಫೋಟೋದಲ್ಲಿ ಕಪ್ಪು ಚಿತ್ರವನ್ನು ತೆಗೆದು ತಮ್ಮದೇ ಫೋಟೋ ಹಾಕಿದ್ದಾರೆ. ಆದರೆ ಆ ಫೋಟೋದಲ್ಲಿ ಅರ್ಜುನ್ ಸರ್ಜಾ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿದೆ. ಯಾರೊಂದಿಗೋ ಹೋರಾಡಲು ಸಿದ್ಧರಾದಂತೆ ಆ್ಯಕ್ಷನ್ ಮಾಡಿಕೊಂಡಿದ್ದಾರೆ. ಮುಖ ಗಂಟಿಕ್ಕಿದೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಮೃತದೇಹಕ್ಕೆ ಮಾಡಿದ ಕೊವಿಡ್-19 ಟೆಸ್ಟ್ನ ವರದಿ ಮೂರು ತಾಸಿನ ಬಳಿಕ ಹೊರಬಿತ್ತು…
ಈ ಫೋಟೋವನ್ನು ಫೇಸ್ಬುಕ್ ಪ್ರೊಫೈಲ್ ಮಾಡಿಕೊಳ್ಳುವ ಮೂಲಕ, ತನ್ನ ಅಳಿಯನ್ನು ಅಕಾಲಿಕವಾಗಿ ಕರೆದುಕೊಂಡು ಹೋದ ವಿಧಿಯ ವಿರುದ್ಧದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕವರ್ ಫೋಟೋದಲ್ಲಿ ಇನ್ನೂ ಕಪ್ಪು ಚಿತ್ರವೇ ಉಳಿದುಕೊಂಡಿದೆ.
ಅಳಿಯನ ಸಾವಿನ ಬೆನ್ನಲ್ಲೇ ಫೇಸ್ಬುಕ್ ಕವರ್, ಪ್ರೊಫೈಲ್ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್ ಸರ್ಜಾ