More

    ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ಬೀಳ್ಕೊಡುಗೆ

    ಅರಕೇರಾ: ತಾಲೂಕಿನ ಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಜಿಪಿಟಿ ಹುದ್ದೆಗೆ ನೇಮಕವಾದ ಯದುಕುಮಾರ ಅವರಿಗೆ ಬೀಳ್ಕೊಡುಗೆ ನೀಡುವಾಗ ವಿದ್ಯಾರ್ಥಿಗಳು ಶುಕ್ರವಾರ ಕಣ್ಣೀರು ಹಾಕಿದರು.

    ನಮ್ಮನ್ನು ಬಿಟ್ಟು ಹೋಗಬೇಡಿ ಸರ್

    ಶಿಕ್ಷಕ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದರು. ಶಾಲೆಯಿಂದ ಸಹ ಶಿಕ್ಷಕ ಯದುಕುಮಾರ ಬೇರೆ ಶಾಲೆಗೆ ಹೋಗುತ್ತಿರುವುದು ಬೇಸರ ತರಿಸಿದೆ. ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೆ ಶಿಕ್ಷಕನನ್ನು ಅಪ್ಪಿಕೊಂಡು ಭಾವುಕರಾದರು.
    ಶಿಕ್ಷಕ ಯದುಕುಮಾರ ಮಾತನಾಡಿ, ಶಾಲೆಯಲ್ಲಿ 13 ವರ್ಷ 6 ತಿಂಗಳು ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಸಮುದ್ರ ಗ್ರಾಮದಲ್ಲಿ ಸೇವೆ ಸಲ್ಲಿಸಿರುವ ದಿನಗಳು ಅವಿಸ್ಮರಣೀಯ. ಮಕ್ಕಳು ಭಾವುಕರಾದ ಕ್ಷಣಗಳು ಎಲ್ಲ ಪ್ರಶಸ್ತಿಗಿಂತ ಮಿಗಿಲಾಗಿದೆ ಎಂದರು.

    ಇದನ್ನೂ ಓದಿ: ‘2023 ಅವರಿಗೆ ಅತ್ಯುತ್ತಮ ವರ್ಷವಾಗಿತ್ತು’; ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೆಂಕಟೇಶ್ ಪ್ರಸಾದ್ ಗುಣಗಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts