More

    ನೀರು ಪೂರೈಕೆ ವ್ಯತ್ಯಯ ಸರಿಪಡಿಸಲು ಮನವಿ

    ಹಳಿಯಾಳ: ಪಟ್ಟಣದಲ್ಲಿ 24 ್ಡ 7 ನೀರು ಸರಬರಾಜು ಸಮಸ್ಯೆಯನ್ನು ಕೂಡಲೆ ಪರಿಹರಿಸಬೇಕು ಎಂದು ಜಯ ಕರ್ನಾಟಕ ಸಂಘಟನೆ ವತಿಯಿಂದ ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ಜಯ ಕರ್ನಾಟಕ ಸಂಘಟನೆ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶಾಸಕರನ್ನು ಭೇಟಿಯಾದ ನಿಯೋಗ ಕುಡಿಯುವ ನೀರಿನ ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿ ಲಿಖಿತ ಮನವಿ ಸಲ್ಲಿಸಿದರು.

    ದಾಂಡೇಲಿ ತಾಲೂಕಿನ ಕಾಳಿ ನದಿ ನೀರನ್ನು ಪಕ್ಕದ ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿಗೆ ಸತತವಾಗಿ ದಿನದ 24 ತಾಸು ಒದಗಿಸಲಾಗುತ್ತಿದೆ. ಆದರೆ, ಹಳಿಯಾಳ ಪಟ್ಟಣಕ್ಕೆ ಮಾತ್ರ ದಿನಕ್ಕೆ 1 ತಾಸು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಸಂಘಟನೆಯ ತಾಲೂಕು ಅಧ್ಯಕ್ಷ ಶಿರಾಜ ಮುನವಳ್ಳಿ, ಉಪಾಧ್ಯಕ್ಷ ಗೋಪಾಲ ಗರಗ, ಕಾರ್ಯದರ್ಶಿ ಮಹೇಶ ಹೊಲಕೊಪ್ಪ, ದತ್ತಾ ಬಿ, ನವೀನ ಕಣಗಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts