More

    ಶರಣ ಸಂಕುಲದ ಧ್ರುವತಾರೆ ಹಡಪದ ಅಪ್ಪಣ್ಣ

    ಶಿಗ್ಗಾಂವಿ: ಹಡಪದ ಅಪ್ಪಣ್ಣನವರು ಇಡೀ ಶರಣ ಸಂಕುಲಕ್ಕೆ ಧ್ರುವತಾರೆಯಂತಿದ್ದರು ಎಂದು ಉಪನ್ಯಾಸಕ ಪ್ರೊ. ಶಶಿಕಾಂತ ರಾಠೋಡ ಹೇಳಿದರು.

    ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ತಾಲೂಕಿನ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಹಡಪದ ಅಪ್ಪಣ್ಣ 889 ಜಯಂತ್ಯುತ್ಸವದ ನಿಮಿತ್ತ ಶನಿವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಸಮಾವೇಶ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

    ಹಡಪದ ಅಪ್ಪಣ್ಣ ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದು, ಅವರ ಸ್ವಾಮಿನಿಷ್ಠೆ ಹಾಗೂ ಕಾರ್ಯತತ್ಪರತೆ ಕಂಡು ಬಸವಣ್ಣನವರು ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅಪ್ಪಣ್ಣ ಹಾಗೂ ಲಿಂಗಮ್ಮರ ವಚನಗಳು ಅಜ್ಞಾನಿಗಳಿಗೆ, ಶೋಷಿತರಿಗೆ ದಾರಿದೀಪವಾಗಿವೆ. ಶರಣ ಸಂಕುಲ ತಮ್ಮ ವಚನಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಕಾಯಕವನ್ನೇ ನಂಬಿರುವ ಹಡಪದ ಸಮಾಜ ತಮ್ಮ ಕಾಯಕ ಮರೆತಿದ್ದರೆ, ಮಾನವ ಕಾಡು ಮೃಗಗಳಿಗಿಂತಲೂ ಕಡೆಯಾಗಿ ಕಾಣುತ್ತಿದ್ದ ಎಂದರು.

    ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಾಸೀರ್‌ಖಾನ್ ಪಠಾಣ, ಡಿ.ಎಸ್. ಮಾಳಗಿ ಮಾತನಾಡಿದರು.

    ಸಮಾಜದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಸಿ.ಎಸ್. ಪಾಟೀಲ, ಕರೆಪ್ಪ ಕಟ್ಟಿಮನಿ, ವೀರೇಶ ಆಜೂರ, ಷಣ್ಮುಖಪ್ಪ ಕಾಯಕದ, ಫಕೀರಜ್ಜ ಕುನ್ನೂರ, ಬಸವರಾಜ ಶಿಗ್ಗಾವಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts