ಮುಂಬೈ: ಬಾಲಿವುಡ್ನ ನಟ-ನಟಿಯರಿಗೆ ಪಾಪರಾಜಿಗಳ ಕಾಟ ಜಾಸ್ತಿಯಾಗಿದೆ. ಸೆಲೆಬ್ರಿಟಿಗಳು ಹೋದಲ್ಲಿ, ಬಂದಲ್ಲಿ ಅವರನ್ನು ಹಿಂಬಾಲಿಸುವ ಕೆಲವು ಫೋಟೋಗ್ರಾಫರ್ಗಳು, ಕೆಲವು ಖಾಸಗಿ ಕ್ಷಣಗಳನ್ನು ಕ್ಲಿಕ್ ಮಾಡಿ ಪ್ರಾಚರ ಮಾಡುವ ಕುರಿತು ಹಲವರು ಈಗಾಗಲೇ ತಿರುಗಿಬಿದ್ದಿದ್ದಾರೆ. ದೀಪಿಕಾ ಪಡುಕೋಣೆ, ಕಳೆದ ತಿಂಗಳಷ್ಟೇ ನಡುರಸ್ತೆಯಲ್ಲಿ ಪಾಪರಾಜಿಯೊಬ್ಬರ ಜತೆಗೆ ಈ ವಿಷಯವಾಗಿ ಜಗಳ ಆಡಿದ್ದು, ಸುದ್ದಿಯಾಗಿತ್ತು.
ಇದನ್ನೂ ಓದಿ: ಕನ್ನಡದ ನಿರ್ಮಾಪಕರು ಮೀಟಿಂಗ್ ಮಾಡಿದ್ದು ಯಾಕೆ?
ಇದೀಗ ಮತ್ತೊಬ್ಬ ನಟಿ ಅನುಷ್ಕಾ ಶರ್ಮ ಸಹ ಒಬ್ಬ ಫೋಟೋಗ್ರಾಫರ್ ಕುರಿತು ಅಸಹನೆ ವ್ಯಕ್ತಪಡಿಸಿದ್ದಾರೆ. ತಮ್ಮ ಖಾಸಗಿತನಕ್ಕೆ ಧಕ್ಕೆ ತರಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಾಕಷ್ಟು ಮನವಿ ಮಾಡಿದ ನಂತರವೂ, ಆ ಫೋಟೋಗ್ರಾಫರ್ ಮತ್ತು ಮಾಧ್ಯಮ ಸಂಸ್ಥೆಯೊಂದು ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ. ತಕ್ಷಣವೇ ಇದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ. ಜತೆಗೆ, ತಮ್ಮ ಗಂಡ ವಿರಾಟ್ ಕೋಹ್ಲಿ ಅವರೊಂದಿರುಗವ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶೇ. 100ರಷ್ಟು ಹಾಜರಾತಿ ರದ್ದು … ‘ಮಾಸ್ಟರ್’ ಬಿಡುಗಡೆಗೆ ಹಿನ್ನೆಡೆ
ಮೊದಲೇ ಹೇಳಿದಂತೆ, ಮುಂಬೈನಲ್ಲಿ ಪಾಪರಾಜಿಗಳ ಕಾಟ ಸಾಕಷ್ಟು ಹೆಚ್ಚಿದ್ದು, ಬಾಲಿವುಡ್ನ ಸೆಲೆಬ್ರಿಟಿಗಳು ಅವರಿಂದ ತಪ್ಪಿಸಿಕೊಂಡು ತಿರುಗುವಂತಾಗಿದೆ. ಈಗಾಗಲೇ ಹಲವು ಸೆಲಬ್ರಿಟಿಗಳು ಈ ವಿಷಯವಾಗಿ ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಗಳೂ ನಡೆದಿವೆ. ಇದೀಗ ಅನುಷ್ಕಾ ಶರ್ಮ ಸಹ ಎಚ್ಚರಿಕೆ ಕೊಟ್ಟಿದ್ದು, ಇದನ್ನು ಪಾಪರಾಜಿಗಳು ಅದೆಷ್ಟು ಗಂಭೀರವಾಗಿ ಪರಿಗಣಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್!