More

    ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು…

    ಬೆಂಗಳೂರು: ಪಕ್ಷ, ತತ್ವ, ಪಂಥ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಈ ಹಿಂದೊಮ್ಮೆ ಉಂಟಾಗಿದ್ದ ಸಂಘರ್ಷ ಪ್ರಶಸ್ತಿ ವಾಪ್ಸಿಯಂಥ ಅಭಿಯಾನಕ್ಕೆ ಕಾರಣವಾಗಿತ್ತು. ಇದೀಗ ಪಠ್ಯ ಪರಿಷ್ಕರಣೆ ಸಂಬಂಧ ಉಂಟಾಗಿರುವ ಸಂಘರ್ಷ ಕೂಡ ಅಂಥದ್ದೇ ಹಾದಿ ಹಿಡಿದಿದ್ದು, ಪಾಠ ವಾಪ್ಸಿ ಎನ್ನುವಂಥ ಬೆಳವಣಿಗೆಗೆ ಕಾರಣವಾಗಿದೆ.

    ಈ ಹಿಂದೆ ಎಡಪಂಥೀಯ ಒಲವಿನ ಸಾಹಿತಿಗಳು ಒಂದಷ್ಟು ಮಂದಿ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಸಲುವಾಗಿ ಪ್ರಶಸ್ತಿಯನ್ನು ಹಿಂದಿರುಗಿಸಿ ಗಮನ ಸೆಳೆದಿದ್ದರು. ಈಗ ಅದೇ ವಲಯದ ಕೆಲವರು ಪಠ್ಯ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಪಾಠ ವಾಪ್ಸಿಗೆ ಮುಂದಾಗಿದ್ದಾರೆ.

    ಈ ನಿಟ್ಟಿನಲ್ಲಿ ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ಪಾಠವನ್ನು ಹಿಂಪಡೆಯುವ ಇಂಗಿತ ವ್ಯಕ್ತಪಡಿಸಿದ್ದಲ್ಲದೆ ಅನುಮತಿ ಕೂಡ ನಿರಾಕರಿಸಿದ್ದಾರೆ. ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ನನ್ನದೊಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಸೇರಿಸಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿರುವ ಅವರು ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿ ಕೂಡ ಹಿಂಪಡೆದಿದ್ದೇನೆ ಎಂದಿದ್ದಾರೆ.

    ಡಾ.ಜಿ. ರಾಮಕೃಷ್ಣ ಎಂಬವರು ಈ ಬಗ್ಗೆ ನಂತರ ದನಿ ಎತ್ತಿದ್ದು, ತಮ್ಮ ಯಾವುದೇ ಬರಹವನ್ನು ಪಠ್ಯದಲ್ಲಿ ಅಳವಡಿಸಬೇಡಿ ಎಂದಿರುವ ಅವರು, ಯಾವುದಾದರೂ ಬರಹ ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ತಮ್ಮ ಅನುಮತಿ ಇರುವುದಿಲ್ಲ ಎಂದೂ ಹೇಳಿದ್ದಾರೆ.

    ಪ್ರಶಸ್ತಿ ವಾಪ್ಸಿ ಬಳಿಕ ಇದೀಗ ಪಾಠ ವಾಪ್ಸಿ; ಪಠ್ಯ ಪರಿಷ್ಕರಣೆ ವಿವಾದಕ್ಕೆ ಇನ್ನೊಂದು ತಿರುವು...

    ನಾಳೆ ಭಾರತ್ ಬಂದ್​!: ಯಾರಿಂದ ಕರೆ, ಏನು ಬೇಡಿಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts